ಹೆಬ್ಬಾಳದ ಭೂಪಸಂದ್ರದಲ್ಲಿ ಬಿಡಿಎ ಸೈಟ್ ಪರರ ಪಾಲು – ಕೇಳಿದ್ರೆ ಭೈರತಿ ಬೆಂಬಲಿಗರು ಧಮ್ಕಿ

Public TV
0 Min Read

ಬೆಂಗಳೂರು: ನಗರದ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಭೈರತಿ ಸುರೇಶ್ ಬೆಂಬಲಿಗರ ಆಟಾಟೋಪ ಜೋರಾಗಿದೆ.

ಭೂಪಸಂದ್ರದಲ್ಲಿರೋ ಬಿಡಿಎ ಸೈಟನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡು ಬಿಲ್ಡಿಂಗ್ ಎಬ್ಬಿಸ್ತಿದ್ದಾರೆ. ಯಾಕಪ್ಪ ಬಿಡಿಎ ಸೈಟ್‍ನಲ್ಲಿ ಕಟ್ಟಡ ಕಟ್ತಾಯಿದ್ದೀರ ಅಂತ ಕೇಳಿದ್ರೆ ನೀವ್ಯಾರು ಕೇಳೋದಕ್ಕೆ. ನಾವ್ಯಾರು ಗೊತ್ತಾ ಎಂಎಲ್‍ಎ ಭೈರತಿ ಸುರೇಶ್ ಕಡೆಯವರು ಅಂತಾ ಸ್ಥಳೀಯರಿಗೆ ಧಮ್ಕಿ ಹಾಕಿದ್ದಾರೆ ಎಂಬ ಆರೋಪವೊಂದು ಕೇಳಿಬಂದಿದೆ.

ಒತ್ತುವರಿ ಸೈಟ್ ಬಳಿ ಯಾರಾದ್ರೂ ನಿಂತರೂ ಸಹ ಅವಾಜ್ ಹಾಕ್ತಿದ್ದಾರೆ. ಈ ಬಗ್ಗೆ ಬಿಡಿಎ ಅಧಿಕಾರಿಗಳಿಗೆ ದೂರು ನೀಡಿದ್ರೂ ಪ್ರಯೋಜನವಾಗಿಲ್ಲ. ಇದುವರೆಗೂ ಕಟ್ಟಡ ಕಾಮಗಾರಿ ತಡೆಯೋ ಕೆಲಸ ಮಾಡಿಲ್ಲ ಅಂತ ಸ್ಥಳೀಯರು ದೂರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *