ನಮ್ಮಂತವರನ್ನು ನೆಗ್‍ಲೆಕ್ಟ್ ಮಾಡ್ತಾರೆ, ಬೇಕಾದಾಗ ಕರೀತಾರೆ ಬೇಡವಾದ್ರೆ ಕರಿಯಲ್ಲ: ಯತ್ನಾಳ್

Public TV
1 Min Read

ಬೆಳಗಾವಿ: ನಮ್ಮಂತವರನ್ನ ನೆಗ್‍ಲೆಕ್ಟ್ ಮಾಡ್ತಾರೆ. ಸಿಂದಗಿಯಲ್ಲಿ ಜವಾಬ್ದಾರಿ ಕೊಟ್ಟಾಗ 31 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದೆವು. ಯಾವಾಗ ಬೇಕು ಅವಾಗ ಕರೀತಾರೆ. ಬೇಡವಾದ್ರೆ ಕರಿಯಲ್ಲ. ಇದರಿಂದ ಪಕ್ಷಕ್ಕೆ ಹಾನಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ವಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮಗಳು ಪ್ರತಿಕ್ರಿಯೆ ಕೇಳಿದಾಗ ನಾವೆಲ್ಲಾ ಯಾರು..? ಸಚಿವರಾ ಅಂತಾ ಕುಟುಕಿದ ಯತ್ನಾಳ್, ನಮ್ಮಂತಹ ಅಪ್ರಾಮಾಣಿಕ. ಭ್ರಷ್ಟರನ್ನ ಅಯೋಗ್ಯರನ್ನ ಎಲ್ಲಿ ಸಚಿವರನ್ನಾಗಿ ಮಾಡ್ತಾರೆ. ಪ್ರಾಮಾಣಿಕರನ್ನ ಮಾತ್ರ ಸಚಿವರನ್ನಾಗಿ ಮಾಡುತ್ತಾರೆ. ನಮ್ಮನ್ನ ಸಚಿವರನ್ನಾಗಿ ಮಾಡದಿದ್ದರೆ, ಬದಲಾವಣೆ ಮಾಡದಿದ್ದರೆ ಆ ಕಡೆಗೆ ಹೋಗುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬ ತಾಲೂಕಿನಲ್ಲಿ ನಿಷೇಧಾಜ್ಞೆ ಜಾರಿ

ನಮ್ಮಂತವರನ್ನ ನೆಗ್‍ಲೆಕ್ಟ್ ಮಾಡ್ತಾರೆ. ಸಿಂದಗಿಯಲ್ಲಿ ಜವಾಬ್ದಾರಿ ಕೊಟ್ಟಾಗ 31 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದೆವು. ಯಾವಾಗ ಬೇಕು ಅವಾಗ ಕರೀತಾರೆ. ಬೇಡವಾದರೆ ಕರಿಯಲ್ಲ. ಇದರಿಂದ ಪಕ್ಷಕ್ಕೆ ಹಾನಿ. ಯಡಿಯೂರಪ್ಪ ಯಾವುದೋ ಯಾತ್ರೆ ತಗೊಂಡು ಬಂದ್ರು ಅವಾಗಲೂ ಕರಿಯಲಿಲ್ಲ. ಬಿಎಸ್ ವೈ ರಂತೆ ಬೊಮ್ಮಾಯಿಯವರು ಇದ್ದಾರಾ..? ಬೊಮ್ಮಾಯಿಯವರ ಬಳಿ ನವಗ್ರಹಗಳಿವೆ. ರಾಹು ಕೇತು ಸಹ ಗ್ರಹಗಳು. ನವಗ್ರಹಗಳನ್ನ ಆಗಾಗ ಶಾಂತಿ ಮಾಡಿಸಬೇಕು ಎಂದರು.

ಸಿಎಂ ಬೊಮ್ಮಾಯಿಯವರು ಶಾಂತಿ ಮಾಡಿಸಿದ್ದಾರೆ. ಕಾಶಿಗೆ ಹೋಗಿ ಬಂದಿದ್ದಾರೆ. ಬೆಳಗಾವಿಯ ಫಲಿತಾಂಶ ಸೇರಿದಂತೆ ಎಲ್ಲ ಸೋಲುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಕೆಲಸ ಮಾಡಬೇಕು. ರಾಜ್ಯದ ನಾಯಕರು ಎಲ್ಲರನ್ನೂ ಕರೆದು ಚುನಾವಣೆ ಬಗ್ಗೆ ಮಾಹಿತಿ ಪಡೆದು ಸರಿಪಡಿಸಬೇಕು ಎಂದು ಹೇಳಿದರು. ಇದನ್ನೂ ಓದಿ: 5 ತಿಂಗಳ ಗರ್ಭಿಣಿ ಪತ್ನಿಯನ್ನು ನೀರಿನಲ್ಲಿ ಮುಳುಗಿಸಿ ಕೊಂದ ಪತಿ

Share This Article
Leave a Comment

Leave a Reply

Your email address will not be published. Required fields are marked *