ಅವಿವೇಕಿತನ ಹೇಳಿಕೆ ನಿಮಗೆ ಶೋಭೆ ತರಲ್ಲ- ಹೆಚ್‍ಡಿಕೆ ವಿರುದ್ಧ ಬಿ.ಸಿ ಪಾಟೀಲ್ ಗರಂ

Public TV
1 Min Read

ಹಾವೇರಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ಹಿರೇಕೆರೂರು ಶಾಸಕ ಬಿ.ಸಿ ಪಾಟೀಲ್ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಶಾಸಕರು, ಮಾಜಿ ಮುಖ್ಯಮಂತ್ರಿ ಆಗಿರೋ ನೀವು ಈ ರೀತಿಯ ಹೇಳಿಕೆ ನೀಡುವುದಕ್ಕೆ ನೂರು ಸಾರಿ ಯೋಚನೆ ಮಾಡಬೇಕು. ಮಾಜಿ ಸಿಎಂ ಆದ ನೀವು ಪೊಲೀಸ್ ಇಲಾಖೆಯನ್ನ ಪದೇ ಪದೇ ಹೀಯಾಳಿಸಿ, ಶಂಕಿಸಿ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಬಾರದು. ಇಂಥ ಅವಿವೇಕಿತನದ ಹೇಳಿಕೆ ನೀಡಿರುವುದು ನಿಮಗೆ ಶೋಭೆ ತರುವುದಿಲ್ಲ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಕುಮಾರಸ್ವಾಮಿ ಹೇಳಿದ್ದೇನು?
ಮಂಗಳೂರಿನ ಉಳ್ಳಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಾಜಿ ಸಿಎಂ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಂಬ್ ನ್ನು ಹರಸಾಹಸಪಟ್ಟು ನಿಷ್ಕರಿಯಗೊಳಿಸಿದ್ದೆಲ್ಲವೂ ಪೊಲೀಸರು ಸ್ವಾತಂತ್ರ್ಯ ದಿನಾಚರಣೆ ಅಥವಾ ಗಣರಾಜ್ಯೋತ್ಸವದಂದು ನಡೆಸುವ ಅಣುಕು ಪ್ರದರ್ಶನದಂತಿತ್ತು ಎಂದು ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಹೌದು, ಬಾಂಬ್ ಇಟ್ಟಿದ್ದು ನಾನೇ – ತಪ್ಪೊಪ್ಪಿಕೊಂಡ ಆದಿತ್ಯ ರಾವ್

ಅಲ್ಲದೆ ಜನರ ಮಧ್ಯೆ ಕಂಕದ ನಿರ್ಮಿಸುವ ಉದ್ದೇಶದಿಂದ ಯಾವುದೋ ಸಂಘಟನೆ ಮುಖಾಂತರ ಈ ಪ್ರಹಸನ ನಡೆಸಿದ್ದು ಸರ್ಕಾರವೇ ಅದರ ಸತ್ಯಾಸತ್ಯತೆ ಜನತೆ ಮುಂದೆ ಇಡಬೇಕಾಗಿದೆ ಎಂದು ಕೂಡ ಅವರು ಹೇಳಿದ್ದರು. ಇದನ್ನೂ ಓದಿ: ಏರ್‌ಪೋರ್ಟ್‌ ಬಳಿ ಬಾಂಬ್ ಇಡಲು ಸಿಸಿಟಿವಿ ಆಫ್ ಮಾಡಿಸಿದ್ರಾ?: ಎಚ್‍ಡಿಕೆ

Share This Article
Leave a Comment

Leave a Reply

Your email address will not be published. Required fields are marked *