ಹೆಲ್ಮೆಟ್ ಇಲ್ಲದೆ ತ್ರಿಬಲ್ ರೈಡ್ ಮಾಡಿದ ಸಚಿವರು, ಶಾಸಕರು

Public TV
1 Min Read

ತುಮಕೂರು: ಹೆಲ್ಮೆಟ್ ಇಲ್ಲದೆ ಸಚಿವರು ಹಾಗೂ ಶಾಸಕರು ತುಮಕೂರಿನ ಕುಣಿಗಲ್ ಪಟ್ಟಣದಲ್ಲಿ ತ್ರಿಬಲ್ ರೈಡ್ ಮಾಡಿದ್ದಾರೆ.

ಆಹಾರ ಸಚಿವ ಜಮೀರ್ ಅಹಮದ್ ಹಾಗೂ ಕುಣಿಗಲ್ ಶಾಸಕ ಡಾ.ರಂಗನಾಥ್ ಅವರು ತ್ರಿಬಲ್ ರೈಡ್ ಮಾಡುವ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಜಮೀರ್ ಅಹಮದ್ ಸಂಬಂಧಿಕರ ಮದುವೆಗೆ ಬಂದಿದ್ದರು. ಈ ವೇಳೆ ತ್ರಿಬಲ್ ರೈಡ್ ಮಾಡಿದ್ದಾರೆ.

ಗ್ರಾಮದೇವತೆ ಸರ್ಕಲ್ ನಿಂದ ದಿವ್ಯಾ ಕಲ್ಯಾಣ ಮಂಟಪದವರೆಗೆ ಹೆಲ್ಮೆಟ್ ಇಲ್ಲದೆ ಜಮೀರ್ ತ್ರಿಬಲ್ ರೈಡ್ ಮಾಡಿದ್ದಾರೆ. ಜಮೀರ್ ಬುಲೆಟ್ ನಲ್ಲಿ ಶಾಸಕ ರಂಗನಾಥ್ ಹಾಗೂ ಇನ್ನೋರ್ವ ಕಾರ್ಯಕರ್ತ ಸಾಥ್ ನೀಡಿದ್ದಾರೆ. ಇದ್ನನೂ ನೋಡಿಯೂ ಪೊಲೀಸರು ನೋಡದಂತೆ ಮೂಕ ಪ್ರೇಕ್ಷಕರಾಗಿದ್ದರು.

ಸಚಿವ ಜಮೀರ್ ಪೊಲೀಸರ ಭದ್ರತೆಯಲ್ಲೇ ಕಲ್ಯಾಣ ಮಂಟಪಕ್ಕೆ ತಲುಪಿದ್ದಾರೆ.

ಸಚಿವರು ಹಾಗೂ ಶಾಸಕರ ಈ ನಡೆಯ ಬಗ್ಗೆ ನೀವೇನು ಹೇಳುತ್ತೀರಿ? ಕಮೆಂಟ್ ಮಾಡಿ..

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *