ನಿಗೂಢವಾಗಿ ನಾಪತ್ತೆಯಾಗಿದ್ದ ಬೆಂಗ್ಳೂರಿನ ಬಾಲಕರು ಪತ್ತೆ

Public TV
1 Min Read

ಬೆಂಗಳೂರು: ಸೋಮವಾರ ಸಂಜೆ ಪೋಷಕರಿಗೆ ಟ್ಯೂಷನ್‍ಗೆ ಹೋಗೋದಾಗಿ ಹೇಳಿ ನಿಗೂಢವಾಗಿ ನಾಪತ್ತೆಯಾಗಿದ್ದ ಆರು ಮಂದಿ ವಿದ್ಯಾರ್ಥಿಗಳು ಮಾಗಡಿ ಬಳಿಯ ತಾವರೆಕೆರೆಯಲ್ಲಿ ಪತ್ತೆಯಾಗಿದ್ದಾರೆ

ಬಾಲಕರನ್ನು ಪತ್ತೆ ಹಚ್ಚುವಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಯಶಸ್ವಿಯಾಗಿದ್ದು, ಮಾಗಡಿ ತಾಲೂಕಿನ ಮರಳುಗೊಂಡ್ಲು ಗ್ರಾಮದಲ್ಲಿ ಮಕ್ಕಳು ಸೋಮವಾರ ರಾತ್ರಿಯೇ ಬಂದಿದ್ದರು ಎಂದು ತಿಳಿದು ಬಂದಿದೆ. ಇದನ್ನು ಓದಿ: ಟ್ಯೂಷನ್‍ಗೆ ಹೋಗುವುದಾಗಿ ಹೇಳಿ ಬೆಂಗ್ಳೂರಿನ ಐವರು ಬಾಲಕರು ನಾಪತ್ತೆ

ಸೆಂಟ್ ಕ್ಲಾರೆನ್ಸ್ ಶಾಲೆಯ ರಾಕೇಶ್, ಸೃಜನ್, ವರುಣ್, ರೇಣು, ಚಂದನ್, ಹಾಗೂ ಅನೂಪ್ ಪತ್ತೆಯಾದ ವಿದ್ಯಾರ್ಥಿಗಳಾಗಿದ್ದು, ಇವರೆಲ್ಲಾ ರಾಕೇಶ್ ಅವರ ಅತ್ತೆ ಮನೆಯಲ್ಲಿ ಆಶ್ರಯ ಪಡೆದಿದ್ದರು ಎನ್ನಲಾಗಿದೆ. ಇನ್ನು, ಮಕ್ಕಳ ಪತ್ತೆಗಾಗಿ ವಿಜಯನಗರ ಎಸಿಪಿ ಪರಮೇಶ್ವರ ಹೆಗ್ಗಡೆ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಇದೀಗ ಮಕ್ಕಳ ಪತ್ತೆಯಿಂದಾಗಿ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *