ಶಿಕಾರಿಗೆ ಹೋಗಿದ್ದ ವೇಳೆ ಮಿಸ್ ಫೈರ್- ವ್ಯಕ್ತಿ ಸ್ಥಳದಲ್ಲೇ ಸಾವು

Public TV
0 Min Read

ಚಿಕ್ಕಮಗಳೂರು: ಶಿಕಾರಿಗೆ ಹೋದ ಸಂದರ್ಭದಲ್ಲಿ ಮಿಸ್ ಫೈರ್ ಆಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಜಿಲ್ಲೆಯ ಎನ್‍ಆರ್ ಪುರ ತಾಲೂಕಿನ ಸಾರ್ಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ತಡರಾತ್ರಿ ಧರ್ಮಯ್ಯ ಹಾಗೂ ಗಂಗಾಧರ್ ಎಂಬವರು ಶಿಕಾರಿಗೆ ಹೋಗಿದ್ರು. ಈ ವೇಳೆ ಗಂಗಾಧರ್ ಫೈರ್ ಮಾಡಿದ ಬುಲೆಟ್ ಧರ್ಮಯ್ಯಗೆ ಬಿದ್ದಿದ್ದು, ತೀವ್ರ ರಕ್ತಸ್ರಾವದಿಂದ ಧರ್ಮಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ಬಗ್ಗೆ ಎನ್‍ಆರ್ ಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಗಂಗಾಧರ್‍ರನ್ನ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

https://www.youtube.com/watch?v=oiT8z6159Dw

Share This Article
Leave a Comment

Leave a Reply

Your email address will not be published. Required fields are marked *