ʻಆಪರೇಷನ್‌ ಸಿಂಧೂರʼವನ್ನ ಬಿಜೆಪಿ ರಾಜಕೀಯಗೊಳಿಸುತ್ತಿದೆ – ಕಾಂಗ್ರೆಸ್‌ ಆರೋಪ

Public TV
2 Min Read

ನವದೆಹಲಿ: ವಿಶ್ವ ವೇದಿಕೆಯಲ್ಲಿ ಪಾಕಿಸ್ತಾನದ (Pakistan) ಮುಖವಾಡ ಕಳಚಲು ಹಾಗೂ ಭಾರತದ ʻಆಪರೇಷನ್‌ ಸಿಂಧೂರʼ ಬಗ್ಗೆ ವಿದೇಶಗಳಿಗೆ ಮಾಹಿತಿ ನೀಡಲು ಕೇಂದ್ರ ಸರ್ಕಾರ ಸರ್ವಪಕ್ಷ ಸಂಸದೀಯ ನಿಯೋಗ ರಚನೆ ಮಾಡಿದೆ. ಈ ವಿಚಾರದಲ್ಲೂ ಈಗ ರಾಜಕೀಯ ಜಟಾಪಟಿ ಜೋರಾಗಿದೆ.

ಸರ್ವಪಕ್ಷ ನಿಯೋಗಕ್ಕೆ ಕಾಂಗ್ರೆಸ್‌ ಸೂಚಿಸಿದ ನಾಲ್ಕು ಹೆಸರುಗಳಲ್ಲಿ ಒಬ್ಬರನ್ನು ಮಾತ್ರ ಆಯ್ಕೆ ಮಾಡಿದ ಬಳಿಕ, ಬಿಜೆಪಿ ʻಆಪರೇಷನ್ ಸಿಂಧೂರʼವನ್ನು (Operation Sindoor) ರಾಜಕೀಯಗೊಳಿಸುತ್ತಿದೆ ಎಂದು ಕಾಂಗ್ರೆಸ್ (Conress) ಆರೋಪಿಸಿದೆ. ಆದಾಗ್ಯೂ, ಕಾಂಗ್ರೆಸ್ ಪಕ್ಷವು ರಾಷ್ಟ್ರೀಯ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಲಿದ್ದು, ಈ ಹಂತದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದೆ.

ಕೇಂದ್ರ ಸರ್ಕಾರವು ಯೋಚನೆ ಮೊದಲಿನಿಂದಲೂ ದುರುದ್ದೇಶಪೂರಿತವಾಗಿದೆ. ಆಪರೇಷನ್‌ ಸಿಂಧೂರವನ್ನು ರಾಜಕೀಯ ಗೊಳಿಸಲಾಗುತ್ತಿದೆ ಅನ್ನೋದು ಮೊದಲಿನಿಂದಲೂ ತಿಳಿದಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ (Jairam Ramesh) ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಮುಜೀಬ್ ಬಯೋಪಿಕ್‌ನಲ್ಲಿ ಶೇಖ್ ಹಸೀನಾ ಪಾತ್ರದಲ್ಲಿ ನಟಿಸಿದ್ದ ಬಾಂಗ್ಲಾ ನಟಿ ಅರೆಸ್ಟ್

ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ (Rahul Gandhi), ಆನಂದ್ ಶರ್ಮಾ, ಗೌರವ್ ಗೊಗೊಯ್, ನಾಸಿರ್ ಹುಸೇನ್ ಮತ್ತು ರಾಜಾ ಬ್ರಾರ್ ನಾಲ್ಕು ಹೆಸರುಗಳ ಪಟ್ಟಿಯನ್ನು ಕಳುಹಿಸಿದ್ದರು. ಆದ್ರೆ ಆನಂದ್ ಶರ್ಮಾ ಒಬ್ಬರ ಹೆಸರನ್ನು ಮಾತ್ರ ನಿಯೋಗಕ್ಕೆ ಸೇರಿಸಲಾಗಿದೆ. ಶಶಿ ತರೂರ್‌ ಸೇರಿದಂತೆ ಇತರ ನಾಯಕರ ಹೆಸರು ಕಾಂಗ್ರೆಸ್‌ ನೀಡಿದ ಅಧಿಕೃತ ಪಟ್ಟಿಯಲ್ಲಿ ಇರಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: 2006ರಲ್ಲಿ RSS ಕಚೇರಿ ಮೇಲಿನ ದಾಳಿಯ ಪ್ರಮುಖ ಸಂಚುಕೋರ, ಲಷ್ಕರ್ ಉಗ್ರ ಪಾಕ್‌ನಲ್ಲಿ ಹತ್ಯೆ

ಆದಾಗ್ಯೂ, ರಾಷ್ಟ್ರೀಯ ಹಿತಾಸಕ್ತಿ ಅತ್ಯಂತ ಮುಖ್ಯ ಎಂದು ಕಾಂಗ್ರೆಸ್ ಪಕ್ಷ ನಂಬುತ್ತದೆ. ಸಂಸದರ ನಿಯೋಗ ಹೋಗಲಿ… ನಾವು ಅವರನ್ನು ತಡೆಯುವುದಿಲ್ಲ, ಈ ನಿಯೋಗವನ್ನು ಬಹಿಷ್ಕರಿಸುವುದಿಲ್ಲ. ಜೊತೆಗೆ ರಾಜಕೀಯಗೊಳಿಸುವುದೂ ಇಲ್ಲ ಎಂದು ತಿಳಿಸಿದ್ದಾರೆ.

ಇನ್ನೂ‌ ವಿದೇಶಗಳಿಗೆ ಮಾಹಿತಿ ನೀಡಲು ರಚಿಸಲಾದ ಸರ್ವಪಕ್ಷ ನಿಯೋಗವನ್ನು ಕೇಂದ್ರ ಸಚಿವ ಕಿರಣ್‌ ರಿಜಿಜು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಪಾಕ್‌ ಪ್ರಧಾನಿ ನಿದ್ದೆಗೆಡಿಸಿದ ʻಆಪರೇಷನ್‌ ಸಿಂಧೂರʼ – ಶೆಹಬಾಜ್‌ಗೆ ಮಧ್ಯರಾತ್ರಿ ಕರೆ ಮಾಡಿದ್ಯಾರು?

Share This Article