ಚುನಾವಣೆಯಲ್ಲಿ ದಿಗ್ವಿಜಯ್ ಸಿಂಗ್‍ಗೆ ಸೋಲು – ಸಮಾಧಿಗೆ ಅವಕಾಶ ನೀಡಿ ಎಂದ ‘ಮಿರ್ಚಿ ಬಾಬಾ’

Public TV
1 Min Read

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಗೆಲ್ಲದಿದ್ದರೆ ಸಮಾಧಿ ಆಗುವುದಾಗಿ ಹೇಳಿದ್ದ ವೈರಗಾನಂದ್ ಬಾಬಾ ಅಲಿಯಾಸ್ ಮಿರ್ಚಿ ಬಾಬಾ ಮತ್ತೆ ಸುದ್ದಿಯಲ್ಲಿದ್ದಾರೆ.

ಚುನಾವಣೆಯಲ್ಲಿ ದಿಗ್ವಿಜಯ್ ಸಿಂಗ್ ಅವರು ಸಾಧ್ವಿ ಪ್ರಗ್ಯಾ ಸಿಂಗ್ ವಿರುದ್ಧ ಗೆಲುವು ಪಡೆಯುತ್ತಾರೆ. ಇಲ್ಲವಾದರೆ ತಾವು ಸಮಾಧಿ ತೆಗೆದುಕೊಳ್ಳುವುದಾಗಿ ಬಾಬಾ ತಿಳಿಸಿದ್ದರು. ಸದ್ಯ ಸಾಧ್ವಿ ಪ್ರಗ್ಯಾ ಸಿಂಗ್ ಪ್ರಚಂಡ ಗೆಲುವು ಪಡೆದ ಕಾರಣ ತಾನು ಸಾಯೋದಕ್ಕೆ ಸಮಾಧಿ ಅವಕಾಶ ನೀಡಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಬಾಬಾರ ಈ ಮನವಿಯನ್ನು ಜಿಲ್ಲಾಧಿಕಾರಿಗಳು ತಳ್ಳಿ ಹಾಕಿದ್ದಾರೆ.

ಲೋಕಸಭಾ ಚುನಾವಣೆಯ ಮತದಾನಕ್ಕೂ ಮುನ್ನ ಮಿರ್ಚಿ ಬಾಬಾ ದಿಗ್ವಿಜಯ್ ಸಿಂಗ್ ಗೆಲುವಿಗಾಗಿ ಭಾರೀ ಪ್ರಮಾಣದಲ್ಲಿ ಹೋಮ ಹವನ ನಡೆಸಿದ್ದರು. ಆ ವೇಳೆ ಹವನ ಮಾಡಿಸಿದ್ದರೆ ದಿಗ್ವಿಜಯ್ ಸಿಂಗ್ ಗೆಲುವು ಖಚಿತ ಎಂದು ಹೇಳಿದ್ದರು. ಮಿರ್ಚಿ ಬಾಬಾ ಸಲ್ಲಿಸಿರುವ ಮನವಿ ಅನ್ವಯ ಜೂನ್ 16 ರ ಮಧ್ಯಾಹ್ನ 2 ಗಂಟೆ 11 ನಿಮಿಷಕ್ಕೆ ಬಾಬಾ ಸಮಾಧಿ ತೆಗೆದುಕೊಳ್ಳಲು ಅನುಮತಿ ನೀಡುವಂತೆ ಕೋರಿದ್ದರು.

Share This Article
Leave a Comment

Leave a Reply

Your email address will not be published. Required fields are marked *