ವಿಕಲಚೇತನ ಅಪ್ರಾಪ್ತೆಯ ಅಪಹರಣ: ಮಗಳನ್ನು ಹುಡುಕಿಕೊಡುವಂತೆ ಕುಟುಂಬ ಡಿಎಸ್‍ಪಿ ಮೊರೆ

Public TV
1 Min Read

ಕೊಪ್ಪಳ: ಬಯಲು ಶೌಚಕ್ಕೆ ಹೋದ ವಿಕಲಚೇತನ ಅಪ್ರಾಪ್ತ ಬಾಲಕಿಯನ್ನ ಅಪಹರಣ ಮಾಡಿರೋ ಘಟನೆ ಕೊಪ್ಪಳದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕೊಪ್ಪಳ ತಾಲೂಕಿನ ಮತ್ತೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಾತು ಬಾರದ, ಶ್ರವಣದೋಷವುಳ್ಳ 16 ವರ್ಷದ ಬಸಮ್ಮ ಅಪಹರಣಕ್ಕೊಳಗಾದ ಬಾಲಕಿ.

ಜುಲೈ 28 ರಂದು ರಾತ್ರಿ ಬಹಿರ್ದೆಸೆಗೆ ಹೋದಾಗ ಮತ್ತೂರು ಗ್ರಾಮದ ನಾಗರಾಜ (23) ಎನ್ನುವ ಯುವಕ ಅಪಹರಣ ಮಾಡಿದ್ದಾನೆಂದು ಬಸಮ್ಮ ತಂದೆ ಕೊಟ್ರಪ್ಪ ಅಳವಂಡಿ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಈ ಬಗ್ಗೆ ದೂರು ದಾಖಲಾದರೂ ಆರೋಪಿಯನ್ನ ಬಂಧಿಸಲು ಪೊಲೀಸರು ವಿಳಂಬ ಮಾಡ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಮಗಳನ್ನ ಹುಡುಕಿಕೊಡಿ, ಆರೋಪಿಯನ್ನು ಬಂಧಿಸಿ ಅಂತ ಕೊಪ್ಪಳ ಡಿಎಸ್‍ಪಿ ಶ್ರೀಕಾಂತ ಕಟ್ಟಿಮನಿಯವರಿಗೆ ನೊಂದ ಕುಟುಂಬ ಮೊರೆ ಹೋಗಿದೆ.

Share This Article
Leave a Comment

Leave a Reply

Your email address will not be published. Required fields are marked *