ನಾಯಿ ಬೊಗಳಿದ್ದಕ್ಕೆ ವೃದ್ಧನ ಹತ್ಯೆಗೈದ ಹುಡುಗ

By
1 Min Read

ನವದೆಹಲಿ: ನಾಯಿ ಬೊಗಳಿದ್ದಕ್ಕೆ ಹುಡುಗನೊಬ್ಬ 85 ವರ್ಷದ ವೃದ್ಧನ ಹತ್ಯೆಗೈದಿರುವ ಘಟನೆ ದೆಹಲಿಯ ದ್ವಾರಕಾ ಪ್ರದೇಶದಲ್ಲಿ ನಡೆದಿದೆ.

ಮಾರ್ಚ್ 18ರಂದು ನಜಾಫ್‍ಗಢದಲ್ಲಿ ನಡೆದ ಹೋಳಿ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು, 17 ವರ್ಷದ ಹುಡುಗ ತನ್ನ ನೆರೆಮನೆಗೆ ಬಲವಂತವಾಗಿ ನುಗ್ಗಿದಾಗ ವೃದ್ಧ ದಂಪತಿ ಸಾಕಿದ್ದ ನಾಯಿ ಆತನನ್ನು ಕಂಡ ಬೊಗಳಿದೆ. ಇದರಿಂದ ಕೋಪಗೊಂಡ ಹುಡುಗ ನಾಯಿಗೆ ಹಿಗ್ಗಾಮುಗ್ಗ ಥಳಿಸಿದ್ದಾನೆ. ಈ ವೇಳೆ ಮಧ್ಯೆ ಪ್ರವೇಶಿಸಿದ ನಾಯಿಯ ಮಾಲೀಕ ಅಶೋಕ್ ಕುಮಾರ್ ಅವರಿಗೆ ಲೋಹದ ರಾಡ್‍ನಿಂದ ಹುಡುಗ ಥಳಿಸಿದ್ದಾನೆ. ಇದರಿಂದ ತೀವ್ರವಾಗಿ ಅಶೋಕ್ ಅವರು ಗಾಯಗೊಂಡಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಲಾಭವನ್ನು ದಾನಮಾಡಿ ಎಂದ ಐಎಎಸ್ ಆಫೀಸರ್: ನಿರ್ದೇಶಕರ ಉತ್ತರವೇನು?

crim

ನಂತರ ಅಶೋಕ್ ಅವರ ಪತ್ನಿ ಮೀನಾ ನಡೆದ ಎಲ್ಲ ಘಟನೆಯನ್ನು ನಜಾಫ್‍ಗಢ ಪೊಲೀಸ್ ಠಾಣೆಯ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಬಳಿಕ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಗೊಂಡ ಅಶೋಕ್ ಕುಮಾರ್ ಅವರನ್ನು ರಾವ್ ತುಲಾ ರಾಮ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

ಆರಂಭದಲ್ಲಿ ಹುಡುಗನನ್ನು ಬಂಧಿಸಿದ್ದ ಪೊಲೀಸರು ಬಾಲಕ ಎಂಬ ಕಾರಣಕ್ಕೆ ಬಾಲನ್ಯಾಯ ಮಂಡಳಿಯಿಂದ ಬಿಡುಗಡೆಗೊಳಸಲಾಗಿತ್ತು. ಆದರೆ ಮಾರ್ಚ್ 20 ರಂದು ಗಾಯಗೊಂಡ ಅಶೋಕ್ ಅವರು ಮೃತಪಟ್ಟಿದ್ದು, ಹೀಗಾಗಿ ಮಾರ್ಚ್ 23 ರಂದು ಮತ್ತೊಮ್ಮೆ ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಯಿತು. ಸದ್ಯ ಪೊಲೀಸರು ಮೃತ ವ್ಯಕ್ತಿಯ ಪತ್ನಿ ನೀಡಿದ ಹೇಳಿಕೆ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ : ವರುಣ್ ದವನ್ ಜತೆ ‘ಸಿಟಾಡೆಲ್’ ನಲ್ಲಿ ಸಮಂತಾ: ಕ್ಯಾಮರಾ ಕಣ್ಣಿಗೆ ಹಬ್ಬ

Share This Article
Leave a Comment

Leave a Reply

Your email address will not be published. Required fields are marked *