ಮಗಳನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಬಾಲಕಿಯ ತಂದೆಗೆ ರಾಡುಗಳಿಂದ ಹಲ್ಲೆ!

Public TV
1 Min Read

ಕಾರವಾರ: ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಅಪ್ರಾಪ್ತ ಬಾಲಕಿಯ ತಂದೆಗೆ ರಾಡುಗಳಿಂದ ಹಲ್ಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ದಾಂಡೇಲಿಯ ಮಾರುತಿ ನಗರದಲ್ಲಿ ನೆಡೆದಿದೆ.

ಟೌನ್ ಶಿಪ್ ನ ವಾಸಿಂ ಸಲೀಂ ಶೇಖ್ ಎಂಬುವವರೇ ಹಲ್ಲೆಗೊಳಗಾದ ವ್ಯಕ್ತಿ. ಇವರನ್ನು ಹುಬ್ಬಳ್ಳಿಯ ಎಸ್‍ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಾಸಿಂ ಸಲೀಂ ಶೇಖ್ ಅವರು ತನ್ನ ಅಪ್ರಾಪ್ತ ಮಗಳಿಗೆ ಚುಡಾಯಿಸಿದ್ದ ಮಾರುತಿ ನಗರದ ಪೈಜಾನ್ ಅಬ್ದುಲ್ ಮಹಾಬ್ ಮನೆಗೆ ತೆರಳಿ ಬುದ್ಧಿವಾದ ಹೇಳಿ ಬಂದಿದ್ದರು. ಆದರೆ ಇದನ್ನ ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಫೈಜಾನ್ ತನ್ನ ಗೆಳೆಯ ಸೈಭಾಸ್ ನೊಂದಿಗೆ ಸೇರಿ ರಾಡುಗಳಿಂದ ಹಲ್ಲೆ ನೆಡೆಸಿದ್ದಾರೆ.

ಇದನ್ನು ತಪ್ಪಿಸಲು ಬಂದ ಇಮ್ರಾನ್ ಖಾನ್ ಎಂಬುವರ ಮೇಲೂ ಹಲ್ಲೆ ನೆಡೆಸಿದ್ದಾರೆ. ಈ ಸಂಬಂಧ ದಾಂಡೇಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಫೈಜಾನ್ ತಲೆಮರೆಸಿಕೊಂಡಿದ್ದು ಪೂಲೀಸರು ಆತನನ್ನು ಹುಟುಕಾಟ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *