ಬೆಳಗಾವಿ: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸಿಎಂ ಆಗಿದ್ದಾಗ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ತಾವು ಮಾಡಿದ ತಪ್ಪಿನ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಲೋಕಾಯುಕ್ತ ಅಧಿಕಾರವನ್ನು ಹಿಂಪಡೆದಿದ್ದಾರೆ ಎಂದು ಸಚಿವ ಅಶ್ವಥ್ ನಾರಾಯಣ್ (Ashwath Narayan) ಹೇಳಿದರು.
ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬಿಜೆಪಿ(BJP) ಯವರು ಅಗ್ರೆಸ್ಸಿವ್ ಆಗಿ ಮಾತನಾಡ್ತಿಲ್ಲ ಎಂಬ ಸಚಿವ ಮಾಧುಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದಕ್ಕಿಂತ ಅಗ್ರೆಸ್ಸಿವ್ ಇನ್ನೇನು ಹೇಳಬೇಕು? ಎಂದು ಸಚಿವ ಮಾಧುಸ್ವಾಮಿಗೆ ಸಚಿವರು ಪ್ರಶ್ನಿಸಿದರು. ಇದನ್ನೂ ಓದಿ: ನಾವೆಲ್ಲಾ ಮೂಕ ಪ್ರೇಕ್ಷಕರಾಗಿರೋದು ನಮ್ಮ ದೌರ್ಭಾಗ್ಯ – ಬಿಜೆಪಿಯ ದೌರ್ಬಲ್ಯ ಹೇಳಿಕೊಂಡ ಮಾಧುಸ್ವಾಮಿ
ಇದೇ ವೇಳೆ ಸಿದ್ದರಾಮಯ್ಯ ಅಂದ್ರೆ ಭ್ರಷ್ಟಾಚಾರ. ಡಿ.ಕೆ ಶಿವಕುಮಾರ್ (DK Shivakumar) ಅಂದ್ರೆ ಸರ್ವಿಸ್ ಅಗೇನೆಸ್ಟ್ ಪೇಮೆಂಟ್. ಮೆನು ಕಾರ್ಡ್ ಹಿಡಿದುಕೊಂಡ ಡಿಕೆಶಿ ಕೆಪಿಸಿಸಿ ಅಧ್ಯಕ್ಷ ಓಡಾಡುತ್ತಾರೆ. ಲೋಕಾಯುಕ್ತ ಹಿಂದೆ ಪಡೆದ ಮಹಾನ್ ವ್ಯಕ್ತಿ ಸಿದ್ದರಾಮಯ್ಯ. ತಾವು ಸಿಎಂ ಆಗಿದ್ದಾಗ ತಮ್ಮನ್ನು ತಾವು ರಕ್ಷಣೆ ಮಾಡಲು ಅವರು ಮಾಡಿದ ತಪ್ಪಿನಿಂದ ಭ್ರಷ್ಟಾಚಾರ ರಕ್ಷಣೆ ಮಾಡಬೇಕು ಅಂತಾ ಲೋಕಾಯುಕ್ತ (Lokayukta) ಅಧಿಕಾರ ಹಿಂದೆ ಪಡೆದಿದ್ದಾರೆ. ಇಂತಹ ಘನಕಾರ್ಯ ಮಾಡಿದ್ದೀಯಾ ಮಹಾನುಭಾವ ಅಂತಾ ಕೋರ್ಟ್ನಿಂದ ಛೀಮಾರಿ ಹಾಕಿದ್ದಾರೆ. ಈ ಭ್ರಷ್ಟಾಚಾರ ಪಕ್ಷಕ್ಕೆ ಏನ್ ಹೇಳ್ತೀರಾ..? ಸೆಂಟ್ರಲ್ನಲ್ಲಿ ಕಾಂಗ್ರೆಸ್ ಮಾಲೀಕರು ಬೇಲ್ನಲ್ಲಿ ಓಡಾಡುತ್ತಿದ್ದಾರೆ ಎಂದರು.
ಕೆಪಿಸಿಸಿ (KPCC) ಅಧ್ಯಕ್ಷರು ಬೇಲ್ನಲ್ಲಿ ಓಡಾಡುತ್ತಿದ್ದಾರೆ. ಈ ಬೇಲ್ ಪಾರ್ಟಿ ಬಗ್ಗೆ ಏನು ಹೇಳುತ್ತೀರಾ..? ಕಾಂಗ್ರೆಸ್ ನವರಿಗೆ ಪ್ರೊಟೆಸ್ಟ್ ಮಾಡಲು ಅಧಿಕಾರ ಇಲ್ಲ. ಹೋಗಬೇಕು ಫ್ರೀಡಂ ಪಾರ್ಕ್ನಲ್ಲಿ ಕುಳಿತುಕೊಳ್ಳಬೇಕು. ನಾಟಕ ಮಾಡಲು ಬಂದಿದ್ದಾರೆ. ನಾಟಕ ಕಂಪನಿ ಅಂದ್ರೆ ಕಾಂಗ್ರೆಸ್. ಬಸ್ನಲ್ಲಿ ಎಷ್ಟು ಜನ ಓಡಾಡುತ್ತಿದ್ದಾರಲ್ಲ ಅಷ್ಟೇ ಸೀಟ್ ಬರುತ್ತವೆ. ಏನು ಹೊಡೆದಾಡಿದರೂ ಬಸ್ನಲ್ಲೇ ಹೊಡೆದಾಡಿಕೊಳ್ಳಲಿ ಅಂತಾ ಮಾಡಿದ್ದಾರೆ. ಬಸ್ ನಲ್ಲಿ 50 ಒಳಗೆ ಸೀಟ್ ಇರಬೇಕು, ಅಷ್ಟೇ ಸೀಟ್ ಬರಬಹುದು ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಸಿಎಂಗೆ ಸಿದ್ದರಾಮಯ್ಯ ಬಹಿರಂಗ ಚರ್ಚೆಗೆ ಆಹ್ವಾನ ವಿಚಾರಕ್ಕೆ ಸದನದಲ್ಲಿಯೇ ಮಾತನಾಡಲ್ಲ, ಇನ್ನು ಬಹಿರಂಗ ಚರ್ಚೆ ಏನು?. ಸಿದ್ದರಾಮಯ್ಯ ಬೆಳಗಾವಿಯಲ್ಲಿ ನಡೆದ ಸದನದಲ್ಲಿ ಏನೂ ವಿಷಯ ಪ್ರಸ್ತಾವನೆ ಮಾಡಲಿಲ್ಲ. ಬೆಳಗಾವಿಯ ಅಧಿವೇಶನದಲ್ಲಿ ಪುರೋಸೊತ್ತಾಗಿ ಕುಳಿತಿದ್ದಾರೆ ಎಂದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k