ಮುಸ್ಲಿಂ ಯುವತಿ ಸುಹಾನಾಗೆ ಸಚಿವ ಖಾದರ್ ಬೆಂಬಲ

Public TV
1 Min Read

ಚಾಮರಾಜನಗರ: ಖಾಸಗಿ ವಾಹಿನಿಯಲ್ಲಿ ಮುಸ್ಲಿಂ ಯುವತಿ ಸುಹಾನಾ ಸೈಯದ್ ಹಿಂದೂ ಭಕ್ತಿ ಗೀತೆಯನ್ನು ಹಾಡಿದ ಪರಿಣಾಮ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ.ಖಾದರ್ ಯುವತಿಗೆ ನೈತಿಕ ಬೆಂಬಲ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಧಮ್ಕಿ ಮತ್ತು ಮಾನಸಿಕ ಕಿರುಳ ನೀಡುವುದು ತಪ್ಪು, ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಂತಹ ಘಟನೆಗಳನ್ನು ತಡೆಗಟ್ಟಲು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸೈಬರ್ ಕ್ರೈಂ ಹೊಸ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಖಾದರ್ ಪ್ರತಿಕ್ರಿಯಿಸಿದರು.

ಈ ರೀತಿಯಾಗಿ ಸಾಮಾಜಿಕ ಜಾಲಂತಾಣಗಳಲ್ಲಿ ಬೆದರಿಕರ ಹಾಕುವರು ಕೇವಲ ಶೇ.1 ರಷ್ಟು ಜನಗಳು ಮಾತ್ರ, ಇಂತಹ ಸಮಸ್ಯೆ, ಗೊಂದಲಗಳನ್ನು ಉಂಟು ಮಾಡುವವರ ವಿರುದ್ಧ ಉಳಿದ ಶೇ.99 ಜನ ಧ್ವನಿ ಎತ್ತಬೇಕು. ಧರ್ಮದ ಮುಖಂಡರು ಜನರಿಗೆ ಉಪದೇಶ ಮಾಡಬೇಕು ಎಂದು ಖಾದರ್ ಹೇಳಿದರು.

ಇದನ್ನೂ ಓದಿ: ಸಹಿಷ್ಣುತೆಯ ಪಾಠ ಹೇಳೋ ಲದ್ದಿಜೀವಿಗಳು ಈಗ ಎಲ್ಲಿದ್ದಾರೆ- ಸುಹಾನ ವಿಚಾರದಲ್ಲಿ ಪ್ರತಾಪ್ ಸಿಂಹ ಪ್ರಶ್ನೆ

Share This Article
Leave a Comment

Leave a Reply

Your email address will not be published. Required fields are marked *