ರಂಭಾಪುರಿ ಶ್ರೀಗಳ ಭವಿಷ್ಯಕ್ಕೆ ಟಾಂಗ್ ನೀಡಿದ ಸಚಿವ ಶ್ರೀನಿವಾಸ್

Public TV
1 Min Read

ತುಮಕೂರು: ಮಠಾದೀಶರುಗಳು ಒಂದು ವ್ಯಕ್ತಿ, ಸರ್ಕಾರದ ಹಣೆಬರಹ ಬರೆಯು ಹಾಗಿದ್ದರೆ ಅವರೇ ಎಲ್ಲರನ್ನೂ ಗೆಲ್ಲಿಸುತ್ತಿದ್ದರು. ರಾಜಕಾರಣಿಗಳು ಹಳ್ಳಿ ಹಳ್ಳಿ ಸುತ್ತಿ ಜನರ ಕಾಲಿಗೆ ಬೀಳುವ ಪ್ರಮೇಯ ಬರುತ್ತಿರಲಿಲ್ಲ ಎಂದು ರಂಭಾಪುರಿ ಶ್ರೀಗಳಿಗೆ ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ಟಾಂಗ್ ಕೊಟ್ಟಿದ್ದಾರೆ.

ಜಿಲ್ಲೆ ಗುಬ್ಬಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಸ್ವಾಮೀಜಿಗಳು ಭವಿಷ್ಯ ನುಡಿದಂತೆ ಆಗಿದ್ದರೆ, ಅವರು ನೇರವಾಗಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡುತ್ತಿದ್ದರು. ನನಗೆ ಜಾತಕ, ಭವಿಷ್ಯದ ಬಗ್ಗೆ ನಂಬಿಕೆ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ರಂಭಾಪುರಿ ಶ್ರೀಗಳು ನುಡಿದಿದ್ದ ಭವಿಷ್ಯವೇನು?

ನಾವು ಐದು ವರ್ಷ ಪೂರೈಸಲು ಪ್ರಯತ್ನ ಪಡುತ್ತಿದ್ದೇವೆ. ಕೊನೆ ತನಕ ತಲುಪುತ್ತೇವೆ ಎನ್ನುವುದು ಯಾರಿಗೆ ಗೊತ್ತು. ಸರ್ಕಾರದ ಭವಿಷ್ಯ ಮುಂದಿನ ದಿನದಲ್ಲಿ ಗೊತ್ತಾಗುತ್ತದೆ. ನಾವೆಲ್ಲರೂ ದಡ ಸೇರುತ್ತೇವೆ ಎಂಬ ಭರವಸೆಯಿಂದ ಹೊರಟಿದ್ದೇವೆ, ಮೇಲೆ ಭಗವಂತ ಹೇಗೆ ಬರೆದಿದ್ದಾನೋ ಹಾಗಾಗುತ್ತದೆ ಎನ್ನುವ ಮೂಲಕ ಸರ್ಕಾರದ ಸ್ಥಿರತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *