ವಿವಾದ ಮಾಡೋರಿಗೆ ಒಳ್ಳೆಬುದ್ಧಿ ಕೊಡಲಿ: ಉಡುಪಿ ಶ್ರೀಕೃಷ್ಣನಲ್ಲಿ ರೋಷನ್ ಬೇಗ್ ಪ್ರಾರ್ಥನೆ

Public TV
1 Min Read

ಉಡುಪಿ: ವಿವಾದ ಇರುತ್ತೆ, ವಿವಾದ ಮಾಡೋರಿಗೆ ದೇವರು ಒಳ್ಳೆಬುದ್ಧಿ ಕೊಡಲಿ ಎಂದು ಉಡುಪಿ ಶ್ರೀಕೃಷ್ಣನಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ತಿಳಿಸಿದ್ದಾರೆ.

ಶ್ರೀಕೃಷ್ಣಮಠಕ್ಕೆ ರೋಷನ್ ಬೇಗ್ ಭೇಟಿಕೊಟ್ಟು ಶ್ರೀಕೃಷ್ಣನ ದರ್ಶನ ಪಡೆದರು. ಕೃಷ್ಣಮಠಕ್ಕೆ ಆಗಮಿಸಿದ ರೋಷನ್ ಬೇಗ್, ಕನಕ ನವಗ್ರಹ ಕಿಂಡಿಯ ಮೂಲಕ ಕಡೆಗೋಲು ಶ್ರೀಕೃಷ್ಣ ದೇವರ ದರ್ಶನ ಪಡೆದು ಕೈ ಮುಗಿದು ಪ್ರಾರ್ಥನೆ ಮಾಡಿದರು. ನಂತರ ಮುಖ್ಯಪ್ರಾಣ ದೇವರ ಗುಡಿಗೆ ಭೇಟಿಕೊಟ್ಟು ಪ್ರಾರ್ಥಿಸಿದರು.

ಈ ಸಂದರ್ಭ ಹಿರಿಯ ಮಠಾಧೀಶ ಪೇಜಾವರ ಸ್ವಾಮೀಜಿಯವರನ್ನು ಭೇಟಿಯಾದ ಸಚಿವ ರೋಷನ್ ಬೇಗ್ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಇಫ್ತಾರ್ ಕೂಟ ನಡೆಸಿದ ಸಂದರ್ಭ ನಾನು ಪತ್ರ ಬರೆದು ಅಭಿನಂದಿಸಿದ್ದೆ. ಕೆಲಸದ ಒತ್ತಡದಿಂದ ನನಗೆ ಭೇಟಿಯಾಗಲು ಸಾಧ್ಯವಾಗಿಲ್ಲ. ಈಗ ಗೌರವ ಅರ್ಪಣೆ ಮಾಡಲು ಬಂದಿದ್ದೇನೆ ಎಂದು ಹೇಳಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರೋಷನ್ ಬೇಗ್- ಇಫ್ತಾರ್ ಕೂಟವನ್ನು ಎಲ್ಲರೂ ಆಯೋಜನೆ ಮಾಡ್ತಾರೆ. ಅದರಲ್ಲಿ ವಿವಾದ ಆಗೋದು ಏನಿದೆ? ವಿವಾದ ಮಾಡುವವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ. ಕರಾವಳಿಯಲ್ಲಿ ಕೋಮು ಸೌಹಾರ್ದ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದರು.

ಹಿಂದುತ್ವ ಮತ್ತು ಹಿಂದೂ ಸಂಘಟನಾ ಚಿಂತನೆ ಹತ್ತಿಕ್ಕುವ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ವೇಣುಗೋಪಾಲ್ ಅವರಿಂದ ಬಂದದ್ದಲ್ಲ. ಈ ಹಿಂದೆಯೂ ಅಹಿಂದ ಬಗ್ಗೆ ಪ್ರೀತಿಯಿತ್ತು. ಸಿಎಂ ಆಗುವ ಮುಂಚೆಯೂ ಅದೇ ವೈಚಾರಿಕತೆ ಹೊಂದಿದ್ದರು ಎಂದು ಸಿಎಂ ಹೇಳಿಕೆಗೆ ರೋಷನ್ ಬೇಗ್ ಬೆಂಬಲ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *