ಎಲ್ಲಿವರೆಗೂ ಹಾಕ್ತಿರಾ ಹಾಕಿ – ಕಬ್ಬಿನ ಬಾಕಿ ಕುರಿತ ಪ್ರಶ್ನೆಗೆ ರಮೇಶ್ ಜಾರಕಿಹೊಳಿ ಗರಂ

Public TV
1 Min Read

ಬೆಂಗಳೂರು: ಕಬ್ಬು ಬೆಳೆಗಾರರ ಬಾಕಿ ಪಾವತಿ ಕುರಿತು ಪ್ರಶ್ನಿಸಿದ್ದಕ್ಕೆ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಗರಂ ಆಗಿಯೇ ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ.

ಸತ್ಯ ಹೇಳಿ ನಿಮ್ಮ ಕಾರ್ಖಾನೆ ಬಾಕಿ ಕ್ಲಿಯರ್ ಯಾವಾಗ ಎಂದು ಪಬ್ಲಿಕ್ ಟಿವಿ ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಕೆಲವೇ ಕ್ಷಣಗಳಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿ ಮಾಡುತ್ತಾರೆ. ನೀವು ಅವರನ್ನೇ ಕೇಳಿ. ನಾನು ಯಾವುದೇ ರೀತಿಯ ಹೇಳಿಕೆ ಕೊಡಲ್ಲ ಎಂದು ಖಾರವಾಗಿ ಗುಡುಗಿದ್ದಾರೆ.

ಸಾಲದ ಬಾಕಿ ಕೇಳಿದಕ್ಕೆ ಸಚಿವರು ಕೋಪಿಸಿಕೊಂಡಿದ್ದಾರೆ. ಬೆಳೆಗಾರರ ಪ್ರತಿಭಟನೆಗೂ ಜಗ್ಗದೆ, ಸಂಪುಟ ಸಭೆಯಿಂದ ಹೊರ ನಡೆದಿದ್ದರು. ಈ ಕುರಿತು ಪಬ್ಲಿಕ್ ಟಿವಿ ಪ್ರಶ್ನಿಸಿದ್ದಕ್ಕೆ ಹಾರಿಕೆ ಉತ್ತರ ನೀಡಿ ಸಚಿವರು ತಪ್ಪಿಸಿಕೊಂಡಿದ್ದಾರೆ.

ಸಚಿವರ ಪ್ರತಿಕ್ರಿಯೆ ಹೇಗಿತ್ತು?:
ಸಚಿವರು – ಹೇಳಿ ಏನ್ ಹೇಳಬೇಕು
ಯಾವ್ ರಿಯಾಕ್ಷನ್ ಕೊಡಲ್ಲ ಮಾ, ಟಿವಿಯವ್ರೇ ಎಲ್ಲ ನೀವ್ ಹಾಕಿದೆ ಕರೆ ನವ್ವ ಎಲ್ಲಿವರೆಗೂ ಹಾಕ್ತಿರಾ ಹಾಕಿ.
ಪ್ರತಿನಿಧಿ – ಯಾವುದು ಊಹೆ ಮಾಡಬಾರದೆಂದು ನಿಮ್ಮ ಬಳಿ ಬಂದಿದ್ದೇವೆ
ಸಚಿವ – ಗೊತ್ತಾಯ್ತು ಬಿಡಮ್ಮ, ಗೊತ್ತಾಯ್ತು ಎಷ್ಟಾದ್ರೂ ಪಬ್ಲಿಕ್ ಟಿವಿಯಲ್ಲಿ ಇದ್ದೀರಿ. ಸಿಎಂ ಬಳಿ ಹೋಗಿ ಕೇಳಿ
ಪ್ರತಿನಿಧಿ – ಸಿಎಂನ್ನು ಇದೇ ಪ್ರಶ್ನೆಕೇಳ್ತಿವಿ
ಸಚಿವ – ಗೊತ್ತಾಯ್ತು ಬಿಡಮ್ಮ, ಪಬ್ಲಿಕ್ ಟಿವಿ ಅಂತ ಗೊತ್ತಾಯ್ತು
ಪ್ರತಿನಿಧಿ – ನಿಮ್ಮಸಕ್ಕರೆ ಫ್ಯಾಕ್ಟರಿ ಬಾಕಿ ಯಾವಾಗ ಕ್ಲಿಯರ್
ಸಚಿವ – ನಮ್ ಕಡೆಯಿಂದ ಮುಖ್ಯಮಂತ್ರಿಗಳನ್ನೇ ಕೇಳ್ರಿ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *