ಕಲ್ಲಡ್ಕ ಪ್ರಭಾಕರ್ ಭಟ್ ಪುಕ್ಕಲ: ರಮಾನಾಥ ರೈ

Public TV
1 Min Read

ಮಂಗಳೂರು: ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಭಟ್ ಒಬ್ಬ ಪುಕ್ಕಲ. ಅವನನು ಅರೆಸ್ಟ್ ಮಾಡಿದ್ರೂ ಏನೂ ಆಗಲ್ಲ ಅಂತಾ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದ್ದಾರೆ.

ರಮಾನಾಥ ರೈ ಜಿಲ್ಲಾ ಎಸ್‍ಪಿ ಭೂಷಣ್ ರಾವ್ ಬೋರಸೆಯವರನ್ನು ಕ್ಲಾಸ್ ತೆಗೆದುಕೊಂಡಿರುವ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಈ ವಿಡಿಯೋದಲ್ಲಿ, “ಗಲಾಟೆ ಮಾಡೋದಿಲ್ಲ, ವಯಸ್ಸಾದವರು. ನನಗೆ ಎಲ್ಲಾ ಹಂಡ್ರೆಡ್ ಪರ್ಸೆಂಟ್ ಗೊತ್ತು, ನೀವು ಮನೆಯವರನ್ನು ಕರೆದುಕೊಂಡು ಹೋದ್ರೆ, ಕಾಂಗ್ರೆಸ್‍ನವರನ್ನೂ ಕೂಡ ಕರೆದುಕೊಂಡು ಹೋಗುವುದು. ಇದು ಮಂಡ್ಯ ಅಲ್ಲ ಇಂಡಿಯಾ ಅಂತ. ನೀವು ಮಂಡ್ಯದಿಂದ ಬಂದಿದ್ದೀರಿ, ಇಲ್ಲಿ ವಿಷ್ಯ ಬೇರೇನೇ ಇದೆ” ಅಂತಾ ಹೇಳಿರುವ ದೃಶ್ಯವಿದೆ.

ನೇತ್ರಾವತಿ ಹೋರಾಟಗಾರರು ಅದು ಮಾಡ್ತಾರೆ, ಇದು ಮಾಡ್ತಾರೆ ಅಂತೀರಿ. ಆದ್ರೆ ಏನೂ ಮಾಡಲ್ಲ, ಪ್ರಭಾಕರ್ ಅರೆಸ್ಟ್ ಮಾಡಿದ್ರೂ ಕೂಡ ಏನೂ ಮಾಡಲ್ಲ, ಇದನ್ನು ನಾನು ಪ್ರಮಾಣಮಾಡಿ ಹೇಳ್ತೀನಿ. ಅವನು ಭಾಷಣ ಮಾಡಿದ್ರೆ ನೀವು ಆತನ ವಿರುದ್ಧ 307 ಕ್ರಿಮಿನಲ್ ಕೇಸ್ ಹಾಕಿ. ಆತ ಹೊರಗೆ ಬಂದ್ರೆ ಹೇಳಿದಾಗೆ ಕೇಳ್ತೀನಿ. ಅವನು ಅಷ್ಟು ದೊಡ್ಡ ವ್ಯಕ್ತಿಯಲ್ಲ, ಎಲೆಕ್ಷನ್ ಟೈಂನಲ್ಲಿ ನಾನು ಅವನನ್ನು ಇಲ್ಲಿಂದ ಓಡಿಸ್ತೀನಿ. ನಾನಲ್ಲ ನಾನಲ್ಲ ಅಂತ ಅವನ ಜೊತೆ ಇದ್ದ ಹುಡುಗ್ರು ಈ ಬಗ್ಗೆ ಜೋಕ್ ಮಾಡಿದ್ರು ಅಂತಾ ಸಚಿವರು ಹೇಳಿದ್ದಾರೆ.

https://www.youtube.com/watch?v=0TjehsPe2VA

Share This Article
Leave a Comment

Leave a Reply

Your email address will not be published. Required fields are marked *