ಕಾಂಗ್ರೆಸ್ ಬೊಬ್ಬೆ ಹಾಕುವ ಕೆಲಸ ಮಾಡ್ತಿದೆ: ಪ್ರಭು ಚವ್ಹಾಣ

Public TV
1 Min Read

ಯಾದಗಿರಿ: ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದಲ್ಲಿಟ್ಟುಕೊಂಡು ಅವರ ಕೆಲಸ ಈಗ ಬೊಬ್ಬೆ ಹೊಡೆಯುವುದಾಗಿದೆ ಎಂದು ಯಾದಗಿರಿಯಲ್ಲಿ ಸಚಿವ ಪ್ರಭು ಚವ್ಹಾಣ ಕಾಂಗ್ರೆಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ನಗರದ ಪಿಯು ಕಾಲೇಜ್ ಮೈದಾನದಲ್ಲಿ ಬಿಜೆಪಿ ಪಕ್ಷ ಸಿಎಎ ಜನ ಜಾಗೃತಿ ಬಹಿರಂಗ ಸಭೆಯನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮವನ್ನು ಸಚಿವ ಪ್ರಭು ಚವ್ಹಾಣ ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್ ಕೆಲಸ ಬೊಬ್ಬೆ ಹಾಕುವುದಾಗಿದ್ದು, ಈಗ ಸಿಎಎ ಕಾಯ್ದೆ ಜಾರಿ ಮಾಡಿದ ನಂತರ ಬೊಬ್ಬೆ ಹಾಕುವ ಕೆಲಸ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಮಾತಾ ರಕ್ಷಣೆಗೋಸ್ಕರ ಸಿಎಎ ಕಾಯ್ದೆ ಜಾರಿಗೆ ತಂದಿದ್ದಾರೆ. ದೇಶದ ಜನ ಈ ಕಾಯ್ದೆ ಒಪ್ಪಿದ್ದಾರೆ. ಆದರೆ ಕಾಂಗ್ರೆಸ್ ವಿರೋಧಿಸುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

ರಾಹುಲ್ ಗಾಂಧಿಯನ್ನು ಪಪ್ಪು ಎಂದು ಕರೆದ ಸಚಿವ ಪ್ರಭು ಚವ್ಹಾಣ ಅವರು, ರಾಹುಲ್ ಗಾಂಧಿ ಅವರೇ 60 ವರ್ಷ ಏನು ಮಾಡಿದ್ರಿ, ಅಣ್ಣ ತಮ್ಮಂದರಿಗೆ ಜಗಳ ಮಾಡಿಸುವ ಜೊತೆಗೆ ಅನೇಕ ಉಲ್ಟಾ ಪಲ್ಟಾ ಕೆಲಸ ಮಾಡಿದ್ದೀರಿ. ನಿಮಗೆ ಮೋದಿ ಕಾರ್ಯದಿಂದ ಹೊಟ್ಟೆ ನೋವು ಕಾಣಿಸಿಕೊಂಡರೆ ಹಜ್ಮೋಲಾ (hajmola)  ಸೇವಿಸಬೇಕೆಂದು ಸಚಿವ ಪ್ರಭು ಚವ್ಹಾಣ ಅವರು ಟಾಂಗ್ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *