ಮಂಡ್ಯದಲ್ಲಿ ಸೋಲಿಗೆ ದುಡ್ಡು ವಿಳಂಬವೇ ಕಾರಣ- ಮೇಲ್ಮನೆ ಸೋಲಿನ ರಹಸ್ಯ ಬಿಚ್ಚಿಟ್ಟ ನಾರಾಯಣಗೌಡ

Public TV
1 Min Read

ಮಂಡ್ಯ: ಇತ್ತೀಚಿಗೆ ನಡೆದ ಪರಿಷತ್ ಚುನಾವಣೆಯಲ್ಲಿ ದುಡ್ಡಿನ ಹೊಳೆ ಹೇಗೆಲ್ಲಾ ಹರಿದಿದೆ ಎಂಬುದು ಎಲ್ರಿಗೂ ಗೊತ್ತಿದೆ. ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿಗೆ ಕಾರಣವೇನು ಎಂಬುದನ್ನು ಸಚಿವ ನಾರಾಯಣ ಗೌಡ ಬಾಯ್ಬಿಟ್ಟಿದ್ದಾರೆ.

ನಾವೇನು ಕಾಂಗ್ರೆಸ್ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿರಲಿಲ್ಲ. ಆದರೆ ನಮ್ಮ ಅಭ್ಯರ್ಥಿ ಚುನಾವಣೆಗೆ ಎರಡು ದಿನ ಮೊದಲು ದುಡ್ಡು ಹಂಚಿದ್ರಿಂದ ಸೋಲಾಯ್ತು ಎಂದು ಬಿಜೆಪಿ ಕಾರ್ಯಕರ್ತರ ಮುಂದೆಯೇ ನಾರಾಯಣಗೌಡ ಹೇಳಿದ್ರು. ಕೂಡ್ಲೇ ಪಕ್ಕದಲ್ಲೇ ಇದ್ದ ಸಚಿವ ಗೋಪಾಲಯ್ಯ ಎಚ್ಚೆತ್ತು, ನಾರಾಯಣ ಗೌಡರ ಶರ್ಟ್ ಎಳೆದು ಎಚ್ಚರಿಸುವ ಕೆಲಸ ಮಾಡಿದ್ರು. ಕೂಡ್ಲೇ ನಾರಾಯಣಗೌಡ ವಿಷಯಾಂತರ ಮಾಡಿದ್ರು. ಇದನ್ನೂ ಓದಿ: ಕಮಿಷನ್ ನೀಡುವಂತೆ ಪಿಡಿಓಗಳನ್ನು ಪೀಡಿಸಿದ ಇಓ ಅಧಿಕಾರಿ – ವೀಡಿಯೋ ವೈರಲ್

ಈ ಮಧ್ಯೆ ಪರಿಷತ್ ಸದಸ್ಯರಿಗೆ ಪರಿಷತ್ ಸಚಿವಾಲಯ ಆಯೋಜಿಸಿರುವ 2 ದಿನದ ತರಬೇತಿ ಕಾರ್ಯಾಗಾರದಲ್ಲೂ ದುಡ್ಡಿನ ವಿಚಾರ ಪ್ರಸ್ತಾಪವಾಗಿದೆ. ಪರಿಷತ್ ಸದಸ್ಯರ ಜೊತೆ ಸಿದ್ದರಾಮಯ್ಯ ಸಂವಾದ ಮಾಡುವ ವೇಳೆ, ಶಾಸಕರಿಗಿಂತ ನಾವೇ ಚುನಾವಣೆಯಲ್ಲಿ ಹೆಚ್ಚು ಹಣ ಖರ್ಚು ಮಾಡುತ್ತೇವೆ ಎಂದು ಸದಸ್ಯ ರಮೇಶ್ ಗೌಡ ಹೇಳಿದ್ರು. ಅದಕ್ಕೆ ನಿಮ್ಮಂಥವರು ಬಂದಿರೋದ್ರಿಂದಲೇ ಅಷ್ಟು ಹಣ ಖರ್ಚಾಗ್ತಿದೆ ಎಂದು ಸಿದ್ದರಾಮಯ್ಯ ಕಾಲೆಳೆದ್ರು.

Share This Article
Leave a Comment

Leave a Reply

Your email address will not be published. Required fields are marked *