ಆಗಿರೋದನ್ನ ಕೇಳಮ್ಮ ಆಗದೇ ಇರೋದನ್ನೆಲ್ಲ ಕೇಳ್ಬೇಡ-ನಾನ್ ಹೇಳೊದನ್ನ ಮೊದಲು ಕಿವಿಗೆ ಹಾಕ್ಕೊಳ್ಳಿ: ಸಚಿವ ಕೃಷ್ಣಬೈರೇಗೌಡ

Public TV
1 Min Read

ಬೆಂಗಳೂರು: ಆಗಿರೋದನ್ನು ಕೇಳಮ್ಮ, ಆಗದೇ ಇರೋದನೆಲ್ಲಾ ಕೇಳಬೇಡ. ಆಗಬೇಕಾಗಿರುವ ಕೆಲಸಗಳ ಬಗ್ಗೆ ಮುಂದೆ ಮಾತನಾಡೋಣ ನಾನ್ ಹೇಳದನ್ನ ಮೊದಲು ಕಿವಿಗೆ ಹಾಕ್ಕೊಳಿ ಅಂತಾ ಚುನಾವಣಾ ಪ್ರಚಾರದಲ್ಲಿ ಪ್ರಶ್ನಿಸಿದ ಮಹಿಳೆಗೆ ಸಚಿವ ಕೃಷ್ಣ ಬೈರೇಗೌಡ ಹೇಳಿದ ಮಾತಿದು.

ಬ್ಯಾಟರಾಯನಪುರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಕೃಷ್ಣ ಬೈರೇಗೌಡ್ರು ಚುನಾವಣಾ ಪ್ರಚಾರದಲ್ಲಿ ಮಾತನಾಡುವಾಗ, ಮತದಾರರು ಕ್ಷೇತ್ರದಲ್ಲಿರುವ ಸಮಸ್ಯೆಗಳ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಏರಿಯಾದಲ್ಲಿ ಬಸ್ ಬರೋದಿಲ್ಲ ಸಾಹೇಬ್ರೆ ಅಂತ ಪ್ರಶ್ನಿಸಿದ್ದಕ್ಕೆ ಗರಂ ಅದ ಸಚಿವರು, ಆಗಿರೋದನ್ನ ಕೇಳಮ್ಮ ಆಗದೇ ಇರೋದನ್ನೆಲ್ಲ ಕೇಳ ಬೀಡ ನೀನು ಎಂದು ಏರು ಧ್ವನಿಯಲ್ಲಿ ಮಾತನಾಡಿ ಮಹಿಳೆಯ ಬಾಯಿ ಮುಚ್ಚಿಸಿದ್ದಾರೆ.

ಪತಿ ಕೃಷ್ಣ ಬೈರೇಗೌಡ ಪರ ಮತಯಾಚನೆ ಮಾಡಲು ಹೋದ ಸಚಿವರ ಪತ್ನಿ ಮೀನಾಕ್ಷಿ ಕೃಷ್ಣ ಬೈರೇಗೌಡ ಮತದಾರರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಮತದಾರರ ಪ್ರಶ್ನೆಯಿಂದ ಕೆರಳಿದ ಮೀನಾಕ್ಷಿ ಕೃಷ್ಣ ಭೈರೇಗೌಡ ಯು ನೋ ರಿಯಾಲಿಟಿ..? ಗೊತ್ತಿಲ್ಲದೆ ಮಾತನಾಡ ಬೇಡಿ ಅಂತ ಗದರಿಸಿ ಮೀನಾಕ್ಷಿ ಕೃಷ್ಣ ಬೈರೇಗೌಡ ಕೋಪಗೊಂಡು ಹೊರ ಬಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *