ಸರ್ಕಾರಿ ಸಂಬಳ ತಗೊಳಲ್ವಾ, ಸುಮ್ನೆ ಕೆಲಸ ಮಾಡ್ತೀರಾ: ಸಚಿವ ಗೋಪಾಲಯ್ಯ ಗರಂ

Public TV
1 Min Read

ಚಿಕ್ಕಬಳ್ಳಾಪುರ: ಸರ್ಕಾರಿ ಸಂಬಳ ತಗೊಳಲ್ವಾ, ಮಾಹಿತಿ ಇಲ್ಲದೆ ಸಭೆಗೆ ಬರ್ತಿರಾ? ನಾನೇನು ಸಭೆಗೆ ಮಾತಾಡಿಕೊಂಡು ಹೋಗೋಕೆ ಬಂದಿದ್ದನಾ..? ಬುಕ್ ಲ್ಲಿ ಪ್ರಿಂಟ್ ಆಗಿರೋದು ನೋಡಿಕೊಂಡು ಹೋಗೋಕಾ ಗೋಪಾಲಯ್ಯ ಬಂದಿರೋದಾ ಸಭೆಗೆ ಅಂತ ತಮ್ಮದೇ ಇಲಾಖಾಧಿಕಾರಿ ವಿರುದ್ಧ ಸಚಿವ ಗೋಪಾಲಯ್ಯ ಗರಂ ಆಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ವೇಳೆ ಸಮರ್ಪಕ ಮಾಹಿತಿ ನೀಡದ ಜಿಲ್ಲೆಯ ಆಹಾರ ಇಲಾಖೆಯ ಉಪನಿದೇರ್ಶಕ ಸೋಮಶೇಖರ್ ವಿರುದ್ಧ ಗರಂ ಆದರು. ಬೆಂಗಳೂರಿನಲ್ಲಿ ಸಭೆ ನಡೆಸಿ ತ್ವರಿತಗತಿಯಲ್ಲಿ ಪಡಿತರ ಕಾರ್ಡ್ ವಿತರಣೆ ಮಾಡುವಂತೆ ಸೂಚಿಸಿದ್ರೂ ಸಮರ್ಪಕವಾಗಿ ಕೆಲಸ ಮಾಡಿಲ್ಲ. ಯಾವ ಯಾವ ಕಾರ್ಡ್‍ಗಳು ಎಷ್ಟಿವೆ ಎಂಬ ಮಾಹಿತಿಯೂ ಇಲ್ಲ ಸುಮ್ನೆ ಸಭೆಗೆ ಬರ್ತಿರಾ ಎಂದು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.

ಸಭೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಡಿಡಿ ಸಮರ್ಪಕ ಮಾಹಿತಿ ನೀಡಿಲ್ಲ. ಹೀಗೆ ಮುಂದುವರೆದರೆ ಇಲಾಖೆಗೆ ಇಂತಹ ಅಧಿಕಾರಿ ಅವಶ್ಯಕತೆ ಇಲ್ಲ ಅಂತ ಕಾನೂನು ರೀತಿಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *