ಬೀದರ್ ನಲ್ಲಿ ಮತದಾರರನ್ನು ಸೆಳೆಯಲು ಗಡಿಯಾರ ಹಂಚಿಕೆ

Public TV
1 Min Read

ಬೀದರ್: ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರನ್ನು ಸೆಳೆಯಲು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಗಡಿಯಾರಗಳನ್ನ ಹಂಚುತ್ತಿರುವುದು ಬಯಲಿಗೆ ಬಂದಿದೆ.

ಸರ್ಕಾರದ ದುಡ್ಡಿನಲ್ಲಿ ಭಾಲ್ಕಿ ಕ್ಷೇತ್ರದ ಮತದಾರ ಪ್ರಭುಗಳಿಗೆ ತಮ್ಮ ಭಾವಚಿತ್ರವಿರುವ ಗಡಿಯಾರಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹಂಚುತ್ತಿದ್ದಾರೆ. 200 ರಿಂದ 300 ರೂ. ಬೆಲೆ ಬಾಳುವ ಗಡಿಯಾರವನ್ನು ಸರ್ಕಾರದ ಹೆಸರಿನಲ್ಲಿ ಈಶ್ವರ ಖಂಡ್ರೆ ಹಂಚಿಕೆ ಮಾಡುತ್ತಿದ್ದಾರೆ.

ನಿಟ್ಟೂರು, ಖಟಕ್ ಚಿಂಚೊಳಿ, ಮೇಕರ ಹಾಗೂ ಸಾಯಿಗಾಂವ ಗ್ರಾಮಗಳು ಸೇರಿದಂತೆ ಕ್ಷೇತ್ರದ ಮನೆ ಮನೆಗಳಿಗೆ ಸರ್ಕಾರದ ಗಡಿಯಾರಗಳನ್ನು ನೀಡುತ್ತಿದ್ದಾರೆ.

ಮತದಾರರನ್ನು ಸೆಳೆಯಲು ಜಿಲ್ಲಾ ಉಸ್ತುವಾರಿ ಸಚಿವರು ಹಲವು ದಿನಗಳಿಂದ ಗಡಿಯಾರಗಳನ್ನು ಗಿಫ್ಟ್ ನೀಡುತ್ತಿದ್ದಾರೆ ಎಂಬ ಮಾತು ಕ್ಷೇತ್ರದಲ್ಲಿ ಜೋರಾಗಿ ಕೇಳಿ ಬರುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *