10 ವರ್ಷ ಆಯ್ತು, ಗ್ರಾಮದಲ್ಲಿ ಏನೂ ಆಗಿಲ್ಲ- ಪ್ರಚಾರಕ್ಕೆ ಬಂದ ಸಚಿವರನ್ನ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

Public TV
1 Min Read

ಹಾಸನ: 10 ವರ್ಷ ಕಳೆದರೂ ಯಾವುದೇ ಅಭಿವೃದ್ಧಿ ಮಾಡಿಲ್ಲ. ಆದರೆ ಈಗ ಮತ ಪ್ರಚಾರಕ್ಕೆ ನೀವು ಬಂದಿದ್ದೀರ ಎಂದು ಸಚಿವ ಎ.ಮಂಜು ಅವರಿಗೆ ಗ್ರಾಮಸ್ಥರು ಕ್ಲಾಸ್ ತೆಗೆದುಕೊಂಡ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ಕೆಲ್ಲೂರು ಗ್ರಾಮದಲ್ಲಿ ನಡೆದಿದೆ.

ಸಚಿವ ಎ.ಮಂಜು ಅರಕಲಗೂಡು ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ ಕೂಡ ಅವರಿಗೆ ಕ್ಷೇತ್ರದ ಟಿಕೆಟ್ ಸಿಕ್ಕಿದ್ದು, ಚುನಾವಣೆ ಪ್ರಚಾರಕ್ಕಾಗಿ ಕಳೆದ ರಾತ್ರಿ ಗ್ರಾಮಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಕೃಷಿ ಜಮೀನು ನೀಡುವಲ್ಲಿ ನಮಗೆ ಕಡೆಗಣಿಸಿದ್ದೀರಿ, ಈಗ ವೋಟು ಕೇಳೋದಕ್ಕೆ ಬಂದಿದ್ದೀರ ಎಂದು ಗ್ರಾಮಸ್ಥರು ತರಾಟೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಸಮರ್ಥನೆಗೆ ಮುಂದಾದ ಸಚಿವರ ಮಾತನ್ನು ಗ್ರಾಮಸ್ಥರು ಕೇಳಲಿಲ್ಲ, ರಸ್ತೆ ಅಭಿವೃದ್ಧಿ ಮಾಡಿದ್ದೇನೆ ಅದೂ ಇದೂ ಅನ್ನುವುದಕ್ಕೆ ಮುಂದಾದ್ರು. ಆದರೆ ಗ್ರಾಮಸ್ಥರು ಮಾತ್ರ ಅವರ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಸಚಿವರೊಂದಿಗೆ ಇದ್ದ ಬೆಂಬಲಿಗರು ಸಹ ವಾದಿಸಲು ಮುಂದಾದ್ದರು. ಆದರೂ ಸಹ ಪ್ರಯೋಜನ ಆಗಲಿಲ್ಲ. ಗ್ರಾಮಸ್ಥರ ಆಕ್ರೋಶವನ್ನು ಕಂಡು ವಿಧಿಯಿಲ್ಲದೇ ಸಚಿವರು ಅಲ್ಲಿಂದ ವಾಪಸಾದ್ರು.

ಎ. ಮಂಜು ಅರಕಲಗೂಡು ಕ್ಷೇತ್ರದಿಂದ 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2013ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎ.ಟಿ.ರಾಮಸ್ವಾಮಿ ವಿರುದ್ಧ ಜಯ ಸಾಧಿಸಿದ್ರು. 2008 ಮತ್ತು 1999ರ ಚುನಾವಣೆಗಳಲ್ಲಿ ಜಯ ಸಾಧಿಸಿದ್ದರು.

https://www.youtube.com/watch?v=-0eW63YGmCo

Share This Article
Leave a Comment

Leave a Reply

Your email address will not be published. Required fields are marked *