ನಿಯಂತ್ರಣ ತಪ್ಪಿ ಹಾಲಿನ ಟ್ಯಾಂಕರ್‌ ಪಲ್ಟಿ – ಹಾಲಿಗಾಗಿ ಮುಗಿಬಿದ್ದ ಜನ

Public TV
1 Min Read

ಮಂಡ್ಯ: ನಿಯಂತ್ರಣ ತಪ್ಪಿ ಹಾಲಿನ ಕ್ಯಾಂಟರ್ ಬಿದ್ದಿದ್ದೆ ತಡ ಅಕ್ಕ-ಪಕ್ಕದಲ್ಲಿ ಇದ್ದ ಜನರು ಬಿಂದಿಗೆ, ಕ್ಯಾನ್, ಪಾತ್ರೆಗಳನ್ನು ತಂದು ಹಾಲು ತುಂಬಿಕೊಳ್ಳಲು ಮುಗಿ ಬಿದ್ದ ಘಟನೆ ಮಂಡ್ಯದ ಇಂಡುವಾಳು ಗ್ರಾಮದ ಬಳಿ ಜರುಗಿದೆ.

ಮಂಡ್ಯ ಹಾಲು ಒಕ್ಕೂಟಕ್ಕೆ ಸೇರಿದ ಹಾಲಿನ ಕ್ಯಾಂಟರ್ ರಾಗಿಮುದ್ದನಹಳ್ಳಿ ಗ್ರಾಮದಿಂದ, ಹಾಲನ್ನು ತುಂಬಿಕೊಂಡು ಮಂಡ್ಯದ ಗೆಜ್ಜಲುಗೆರೆಯಲ್ಲಿರುವ ಮನ್‍ಮುಲ್‍ಗೆ ಬರ್ತಾ ಇತ್ತು. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಬರುವ ವೇಳೆ ಇಂಡುವಾಳು ಗ್ರಾಮದ ಬಳಿ ನಿಯಂತ್ರಣ ತಪ್ಪಿ ಹಾಲು ತುಂಬಿದ್ದ ಟ್ಯಾಂಕರ್ ಪಟ್ಟಿ ಹೊಡೆದಿದೆ. ಇದನ್ನೂ ಓದಿ: ಬೊಮ್ಮಾಯಿ ಸರ್ಕಾರಕ್ಕೆ 6 ತಿಂಗಳು – ರಿಪೋರ್ಟ್ ಕಾರ್ಡ್ ತರಿಸಿಕೊಂಡ ಹೈಕಮಾಂಡ್!

ಟ್ಯಾಂಕರ್ ಪಟ್ಟಿಯಾಗಿದ ತಕ್ಷಣ ಟ್ಯಾಂಕರ್‌ನಲ್ಲಿದ್ದ ನೂರಾರು ಲೀಟರ್ ಹಾಲು ರಸ್ತೆಗೆ ಚೆಲ್ಲುತ್ತಿರುವುದನ್ನು ಕಂಡ ಸ್ಥಳೀಯರು ಬಿಂದಿಗೆ, ಕ್ಯಾನ್, ಪಾತ್ರೆಯನ್ನು ತಂದು ಹಾಲನ್ನು ತುಂಬಿಕೊಳ್ಳಲು ನಾ ಮುಂದು ತಾ ಮುಂದು ಎಂದು ಮುಗಿ ಬಿಳುತ್ತಾರೆ. ಟ್ಯಾಂಕರ್ ಪಲ್ಟಿಯಿಂದ ಇದೀಗ ಮನ್‍ಮುಲ್‍ಗೆ ಸಾವಿರಾರು ರೂಪಾಯಿ ನಷ್ಟವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *