ಹಾಲು ಕಲಬೆರಕೆ ಅಡ್ಡೆ ಮೇಲೆ ಮತ್ತೆ ಪೊಲೀಸರ ದಾಳಿ

Public TV
1 Min Read

– ಅಪಾರ ಪ್ರಮಾಣದ ಎಣ್ಣೆ ಜಪ್ತಿ

ಚಿಕ್ಕೋಡಿ(ಬೆಳಗಾವಿ): ಕಲಬೆರಕೆ ಹಾಲು ತಯಾರಿಕಾ ಘಟಕದ ಮೇಲೆ ಪೊಲೀಸರು ಮತ್ತೆ ದಾಳಿ ನಡೆಸಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿನ ಘಟಕದ ಮೇಲೆ ದಾಳಿ ನಡೆಸಿದ್ದು, ಕಲಬೆರಕೆ ಹಾಲು ತಯಾರಿಸುತ್ತಿದ್ದ ಮಹಾಲಿಂಗ ಜಾಧವನನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ. ಕಲಬೆರಕೆ ಹಾಲು ತಯಾರಿಗೆ ಬಳಸುತ್ತಿದ್ದ ಅಪಾರ ಪ್ರಮಾಣದ ಎಣ್ಣೆ, ಮಿಕ್ಸಿ ಸೇರಿದಂತೆ ಇತರೆ ಸಲಕರಣೆಗಳನ್ನು ವಶಕ್ಕೆ ಪಡೆದಿದ್ದಾರೆ.

ಅರಳಿಕಟ್ಟಿ ಗ್ರಾಮದ ಜಾಧವ ತೋಟದಲ್ಲಿ ಮಾಹಾಲಿಂಗ ಜಾಧವ ಕಲಬೆರಕೆ ಹಾಲು ತಯಾರಿಕೆ ನಡೆಸುತ್ತಿದ್ದ. ಗುರುವಾರ ಬೆಳ್ಳಂ ಬೆಳಗ್ಗೆ ಅಥಣಿ ಪೋಲಿಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಅಥಣಿ ತಾಲೂಕಿನಲ್ಲಿ ಕಲಬೆರಕೆ ಹಾಲು ತಯಾರಿ ಅವ್ಯಾಹತವಾಗಿ ನಡೆಯುತ್ತಿದ್ದು, ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ನಿಟ್ಟಿನಲ್ಲಿ ಪೊಲೀಸರು ಸಹ ಕಾರ್ಯ ಪ್ರವೃತ್ತರಾಗಿ ವಸ್ತುಗಳನ್ನು ಜಪ್ತಿ ಮಾಡುತ್ತಿದ್ದಾರೆ.

ಕಳೆದ ನಾಲ್ಕು ದಿನದ ಹಿಂದೆ ಇದೇ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಕಲಬೆರಕೆ ಹಾಲು ಉತ್ಪಾದಕ ಘಟಕದ ಮೇಲೆ ಪೋಲಿಸರು ದಾಳಿ ನಡೆಸಿದ್ದರು. ಝುಂಜರವಾಡ ಗ್ರಾಮದ ಉಮರಾಲಿ ಅನಸಾರಿ(23)ಯನ್ನು ಬಂಧಿಸಿದ್ದರು. ದಾಳಿ ವೇಳೆ ಕಲಬೆರಕೆಯ 665 ಲೀಟರ್ ಹಾಲು ಜಪ್ತಿ ಮಾಡಿಕೊಂಡಿದ್ದರು. ಅಲ್ಲದೆ ಕಲಬೆರಕೆ ಹಾಲು ತಯಾರಿಗೆ ಬಳಸುತ್ತಿದ್ದ ಎಣ್ಣೆ, ಒಂದು ಮಿಕ್ಸಿ ಸೇರಿ ಒಟ್ಟು 49,270 ರೂ. ಮೌಲ್ಯದ ವಸ್ತುಗಳು ಜಪ್ತಿ ಮಾಡಿಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *