ನೆಲದ ಮೇಲೆಯೇ ಪತಿಯನ್ನು ಎಳೆದೊಯ್ದ ಪ್ರಕರಣ – ವೃದ್ಧ ಅಮೀರ್ ಸಾಬ್ ಆರೋಗ್ಯ ಸ್ಥಿತಿ ಗಂಭೀರ

Public TV
1 Min Read

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿ ವ್ಹೀಲ್ ಚೇರ್ ಸಿಗದೆ ಮಹಿಳೆಯೊಬ್ಬರು ತನ್ನ ವೃದ್ಧ ಪತಿಯನ್ನು ನೆಲದ ಮೇಲೆ ಎಳೆದೊಯ್ದ ಪ್ರಕರಣದ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು. ಇದೀಗ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅಮೀರಸಾಬ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಮೆಗ್ಗಾನ್ ಆಸ್ಪತ್ರೆಯ ವೈದ್ಯ ಡಾ. ರಘುನಂದನ್ ತಿಳಿಸಿದ್ದಾರೆ.

ಬೆಳಗ್ಗಿನವರೆಗೂ ಅಮೀರ್ ಸಾಬ್ ಆರೋಗ್ಯ ಚೆನ್ನಾಗಿತ್ತು ಹಾಗು ಚೇತರಿಸಿಕೊಳ್ಳುತ್ತಿದ್ದರು. ಆದರೆ ಬೆಳಗ್ಗೆ 9.30ರ ವೇಳೆಯಲ್ಲಿ ಅರೆಪ್ರಜ್ಞಾವಸ್ಥೆ ತಲುಪಿದ್ದಾರೆ. ಎಂಅರ್‍ಐ ಸ್ಕ್ಯಾನಿಂಗ್ ಮಾಡಿಸಿದಾಗ ಸ್ಟ್ರೋಕ್ ಆಗಿ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ದೃಢಪಟ್ಟಿದೆ. ಇದಕ್ಕೆ ಚಿಕೆತ್ಸೆ ನೀಡಲು ನ್ಯೂರೋ ಸರ್ಜನ್ ಬೇಕು. ಈ ವ್ಯವಸ್ಥೆ ಮೆಗ್ಗಾನ್ ನಲ್ಲಿ ಇಲ್ಲದ ಕಾರಣ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಲು ಸೂಚಿಸಿದ್ದೇವೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ಗುರುವಾರ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಮೀರಸಾಬ್ ಅವರಿಗೆ ಎಕ್ಸ್ ರೇ ಕೊಠಡಿಗೆ ಕರೆದುಕೊಂಡು ಹೋಗಲು ವೀಲ್ ಚೇರ್ ಸಿಗದೇ ಇದ್ದಾಗ ಅವರ ಪತ್ನಿ ಫಮೀದಾ ಪತಿಯನ್ನು ನೆಲದ ಮೇಲೆಯೇ ಎಳೆದುಕೊಂಡು ಹೋಗಿದ್ದರು.

ಇದನ್ನೂ ಓದಿ: ಅಮಾನವೀಯ ದೃಶ್ಯದ ವಿಡಿಯೋ ಮಾಡಿದ್ದು ಯಾಕೆ? ನೋವಿನ ಕಥೆಯನ್ನು ಮುರಳಿ ನಾಯಕ್ ಹೇಳ್ತಾರೆ ಓದಿ

ಇದನ್ನೂ ಓದಿ: ಅಮಾನವೀಯ ಘಟನೆ: ರೋಗಿಯ ಪತ್ನಿಯನ್ನೇ ಆರೋಪಿಯನ್ನಾಗಿಸಿದ ಮೆಗ್ಗಾನ್ ಆಸ್ಪತ್ರೆ

https://www.youtube.com/watch?v=FIfROhD1LVc

 

Share This Article
Leave a Comment

Leave a Reply

Your email address will not be published. Required fields are marked *