ಮೋದಿ ಇಸ್ರೇಲ್‌ಗೆ ಹೋಗಿಬಂದ ಮರುದಿನವೇ ಯುದ್ಧ ಶುರುವಾಯ್ತು: ಎಂ.ಬಿ ಪಾಟೀಲ್‌

1 Min Read

– ಇರಾನ್‌ ನಮ್ಮ ಹಡಗು ಬಿಡದೇ ಇದ್ದಿದ್ರೆ, ನಾವೂ ಚರಂಡಿಯಲ್ಲಿ ಗ್ಯಾಸ್‌ ತೆಗೆಯಬೇಕಿತ್ತು; ಲೇವಡಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಸ್ರೇಲ್‌ಗೆ ಪ್ರವಾಸ ಹೋಗಿದ್ದರು, ಫಾದರ್‌ ಲ್ಯಾಂಡ್‌ ಅಂತ ಹೊಗಳಿದ್ರು. ಅವರು ಹೋಗಿ ಬಂದ ಮರುದಿನವೇ ಯುದ್ಧ ಶುರುವಾಯ್ತು ಎಂದು ಸಚಿವ ಎಂ.ಬಿ ಪಾಟೀಲ್‌ (MB Patil) ಹೇಳಿದರು.

ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ರಾಜ್ಯದಲ್ಲಿ ತೈಲ ಕೊರತೆ (Oil Shortage) ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ತೈಲ ಕೊರತೆಯಿಂದ ಕೈಗಾರಿಕೆಗಳಿಗೂ ಬಹಳ ಕಷ್ಟವಾಗಿದೆ. ಪ್ರಧಾನಿ ಮೋದಿ ಇಸ್ರೇಲ್‌ಗೆ ಹೋಗಿದ್ದರು. ಫಾದರ್ ಲ್ಯಾಂಡ್ ಅಂತ ಹೊಗಳಿದ್ರು, ಅವರು ಹೋಗಿಬಂದ ಮರುದಿನವೇ ಯುದ್ಧ ಶುರುವಾಯ್ತು ಎಂದು ತಿವಿದರು. ಇದನ್ನೂ ಓದಿ: ಇಂದು ವಿಶ್ವವಿಖ್ಯಾತ ಮೇಲುಕೋಟೆ ವೈರಮುಡಿ ಉತ್ಸವ

ನಾವು ಎಡವಿದ್ರೂ, ಇರಾನ್‌ ಎಡವಿಲ್ಲ
ಇರಾನ್‌ನವರು (Iran) ನಮ್ಮ ಹಡಗುಗಳನ್ನ ಬಿಟ್ಟಿದ್ದಾರೆ. ಇಂಡಿಯಾದವರು ನಮ್ಮ ಸ್ನೇಹಿತರು ಅಂತ ಹೇಳಿದ್ರು. ನಾವು ಎಡವಿರಬಹುದು, ಆದ್ರೆ ಇರಾನ್‌ನವರು ಎಡವಿಲ್ಲ. ಎಲ್‌ಪಿಜಿ ಕೊಟ್ಟು ಸಹಕಾರ ಮಾಡಿದ್ದಾರೆ. ಅವರು ಕೊಡದಿದ್ರೆ ಏನಾಗ್ತಿತ್ತು? ನಾವು ಕೂಡ ಚರಂಡಿಯಲ್ಲಿ ಗ್ಯಾಸ್‌ ಮಾಡಬೇಕಿತ್ತು ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಬೆಂಗಳೂರಿಂದ ತಿರುಪತಿಗೆ ಹೊರಟಿದ್ದ ಕಾರು ಅಪಘಾತ; ಅಪ್ಪ-ಅಮ್ಮ, 4 ವರ್ಷದ ಮಗು ಸ್ಥಳದಲ್ಲೇ ಸಾವು

ಮುಂದುವರಿದು… ಇರಾನ್‌ ನಮ್ಮ ಮಿತ್ರರಾಷ್ಟ್ರ. ಇವತ್ತು ನಮಗೆ ಯಾವುದನ್ನೂ ನಿಲ್ಲಿಸಿಲ್ಲ. ಮೋದಿ ಅವರ ವಿದೇಶಾಂಗ ನೀತಿ ವಿಫಲವಾಗಿದೆ. ಏಕೆಂದ್ರೆ ಮೋದಿಯವರದ್ದೇ ಪ್ರತ್ಯೇಕ ವಿದೇಶಾಂಗ ನೀತಿಯಾಗಿದೆ. ಇರಾನ್‌ ಭಾರತದ ಮಿತ್ರರಾಷ್ಟ್ರವಾಗಿದ್ದಕ್ಕೆ ನಮ್ಮ ಹಡಗುಗಳನ್ನ ಬಿಡುತ್ತಿದ್ದಾರೆ. ಇಲ್ಲದಿದ್ದರೇ ನಮ್ಮ ಗತಿ ಏನಾಗ್ತಿತ್ತು? ಎಂದು ಕಳವಳ ವ್ಯಕ್ತಪಡಿಸಿದರು. ಇದನ್ನೂ ಓದಿ: ಲಾರಿಗೆ ಬೈಕ್ ಡಿಕ್ಕಿ – ಸ್ಥಳದಲ್ಲೇ ಇಬ್ಬರು ವಿದ್ಯಾರ್ಥಿಗಳು ದುರ್ಮರಣ

Share This Article