ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್ (Mysore Sandal Soap) ಮಾರ್ಕೆಟಿಂಗ್ ಹೆಚ್ಚು ಮಾಡಲು ನಟಿ ತಮನ್ನಾರನ್ನು (Tamannaah Bhatia) ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್ (M.B Patil) ಮತ್ತೊಮ್ಮೆ ಸಮರ್ಥನೆ ಮಾಡಿಕೊಂಡಿದ್ದಾರೆ.
ವಿಧಾನಸೌಧದಲ್ಲಿ ಅವರು ಮಾತನಾಡಿದರು. ಈ ವೇಳೆ, ಇದೊಂದು ಬ್ಯುಸಿನೆಸ್. ಬ್ಯುಸಿನೆಸ್ಗೆ ಏನು ಬೇಕೋ ಅದನ್ನ ಮಾಡ್ತೀವಿ. 4-5 ನಟಿಯರನ್ನ ನಾವು ಕೇಳಿದ್ವಿ. ಆದರೆ ಯಾರು ಒಪ್ಪಲ್ಲಿಲ್ಲ ಅದಕ್ಕೆ ತಮನ್ನಾರನ್ನು ಫೈನಲ್ ಮಾಡಿದ್ವಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತಮನ್ನಾ ಬದಲು ನಮ್ಮ ನಟಿಯರನ್ನೇ ಮೈಸೂರ್ ಸ್ಯಾಂಡಲ್ ಸೋಪ್ಗೆ ರಾಯಭಾರಿ ಮಾಡಬಹುದಿತ್ತು: ಜಮೀರ್
ನಮ್ಮ ಸೋಪ್ ಕರ್ನಾಟಕದಲ್ಲಿ 18% ಮಾತ್ರ ಮಾರ್ಕೆಟಿಂಗ್ ಇದೆ. ಬೇರೆ ರಾಜ್ಯದಲ್ಲಿ ಜಾಸ್ತಿ ಇದೆ. ಹೀಗಾಗಿ ತಮನ್ನಾ ಆಯ್ಕೆ ಮಾಡಿದ್ದೇವೆ. ಮುಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೋಗೋ ಪ್ಲ್ಯಾನ್ ನಮಗೆ ಇದೆ. ಅದಕ್ಕಾಗಿ ಬಾಲಿವುಡ್ ನಟಿಯನ್ನು ರಾಯಭಾರಿಯಾಗಿ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಾವಿರ ಕೋಟಿ ಲಾಭ ಮಾಡೋ ಉದ್ದೇಶವಿದೆ – ತಮನ್ನಾ ಆಯ್ಕೆಗೆ ಪ್ರಿಯಾಂಕ್ ಖರ್ಗೆ ಸಮರ್ಥನೆ