ನಾಲ್ವರು ಯುವಕರಿಂದ ಮೌಲಾನಾ ಮೇಲೆ ಹಲ್ಲೆ ಆರೋಪ – ನೂರಾರು ಮುಸ್ಲಿಂ ಮುಖಂಡರಿಂದ ಪ್ರತಿಭಟನೆ

Public TV
1 Min Read

ಬಾಗಲಕೋಟೆ: ಅಂಜುಮಾನ್‌ ಮಸೀದಿ (Anjuman Mosque) ಮೌಲಾನಾ ಮೇಲೆ ನಾಲ್ವರು ಯುವಕರಿಂದ ಹಲ್ಲೆ ನಡೆಸಿರುವ ಆರೋಪ ಬಾಗಲಕೋಟೆಯಲ್ಲಿ (Bagalakote) ಕೇಳಿಬಂದಿದೆ.

ಬಾಗಲಕೋಟೆಯ ನವನಗರದ (Navanagara Police) ಸೆಕ್ಟರ್ ನಂ.4 ರಲ್ಲಿ ಘಟನೆ ನಡೆದಿದ್ದು, ಮೌಲಾನಾ ಮೇಲಿನ ಹಲ್ಲೆ ಖಂಡಿರಿ ನೂರಾರು ಮುಸ್ಲಿಂ ಮುಖಂಡರು ರಾತ್ರೋ ರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ನವನಗರ ಪೊಲೀಸ್ ಠಾಣೆಮುಂದೆ ಜಮಾಯಿಸಿದ ನೂರಾರು ಮುಸ್ಲಿಂ ಮುಖಂಡರು ಕಾರ್ತಿಕ್, ಗಣೇಶ್, ಶಿವು ಹಾಗೂ ಆದಿತ್ಯ ಎಂಬ ಯುವಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಬೆನ್ನಲ್ಲೇ ನಾಲ್ವರು ಆರೋಪಿಗಳ (Accused) ಪೈಕಿ ಆರೋಪಿ ಕಾರ್ತಿಕ್‌ ಹಾಗೂ ಪ್ರೀತಮ್ ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತಿಬ್ಬರು ಆರೋಪಿಗಳಿಗಾಗಿ ಶೋಧ ಮುಂದುವರಿಸಿದ್ದಾರೆ. ಸದ್ಯ ನವನಗರ ಪೊಲೀಸ್ ಠಾಣೆ ಬಳಿ ಉದ್ವಿಗ್ನ ವಾತಾವರಣ ಉಂಟಾಗಿದ್ದು, ಪ್ರತಿಭಟನಾ ನಿರತರನ್ನ ಪೊಲೀಸರು ಚದುರಿಸಿದ್ದಾರೆ.

Share This Article