ಮಾತೆ ಮಹಾದೇವಿಗೆ ಬುದ್ಧಿಭ್ರಮಣೆಯಾಗಿದೆ- ರಾಯಚೂರಿನಲ್ಲಿ ಸ್ವಾಮಿಜಿಗಳು ಕಿಡಿ

Public TV
1 Min Read

ರಾಯಚೂರು: ಮಾತೆ ಮಹಾದೇವಿಗೆ ಬುದ್ಧಿ ಭ್ರಮಣೆಯಾಗಿದ್ದು ಹೇಳುವುದೇ ಒಂದು ಮಾಡುವುದು ಇನ್ನೊಂದು ಅಂತ ರಾಯಚೂರಿನ ವಿವಿಧ ಮಠಗಳ ಸ್ವಾಮಿಜಿಗಳು ಕಿಡಿಕಾರಿದ್ದಾರೆ.

ರಾಯಚೂರಿನಲ್ಲಿ ಮಾತನಾಡಿದ ಕಿಲ್ಲೆ ಬೃಹನ್ ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮಿ ಈಗಾಗಲೇ ಅವರ ಪಾದಪೂಜೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ. ಲಿಂಗಾಯತ ಧರ್ಮ ಕಟ್ಟುತ್ತೇನೆ ಅಂತ ಅಡ್ಡಪಲ್ಲಕ್ಕಿ, ಪಾದಪೂಜೆಗಳನ್ನ ವಿರೋಧಿಸುವ ಮಾತೆ ಮಹಾದೇವಿ ಸ್ವತಃ ಸಿಂಹಾಸನ ಮೇಲೆ ಕುಳಿತು ತಾವೇ ಪಾದಪೂಜೆ ಮಾಡಿಸಿಕೊಳ್ಳುತ್ತಾರೆ ಅಂತ ಹೇಳಿದ್ದಾರೆ.

ಬಸವಣ್ಣನವರನ್ನ ಸ್ವತಃ ಕಡೆಗಣಿಸಿರುವ ಮಾತೆ ಮಹಾದೇವಿ ಕೂಡಲಸಂಗಮದಲ್ಲಿ ಲಿಂಗದೇವರು ಹಾಗೂ ತನ್ನ ಫೋಟೋದ ಕೆಳಗೆ ಬಸವಣ್ಣನ ಫೋಟೋ ಇಟ್ಟು ಅವಮಾನ ಮಾಡಿದ್ದಾರೆ ಅಂತ ಬೇಸರ ವ್ಯಕ್ತಪಡಿಸಿದರು.

ಜಾಲಹಳ್ಳಿ ಜಯಶಾಂತಲಿಂಗ ಶಿವಾಚಾರ್ಯರು ಮಾತನಾಡಿ, ಲಿಂಗಾಯತ ಧರ್ಮದ ನಾಟಕ ಕೇವಲ ರಾಜಕೀಯ ಗಿಮಿಕ್, ಇದು ಚುನಾವಣೆವರೆಗೆ ಮಾತ್ರ ನಡೆಯುತ್ತದೆ. ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಮಾತನಾಡುವ ಸಚಿವರುಗಳೇ ಸ್ವತಃ ಲಿಂಗ ಕಟ್ಟಿಲ್ಲ. ಲಿಂಗಪೂಜೆಯನ್ನ ಮಾಡದೆ, ಲಿಂಗ ತತ್ವವೇ ಗೊತ್ತಿಲ್ಲದೆ ರಾಜಕೀಯ ಮಾಡುತ್ತಿದ್ದಾರೆ. ವೀರಶೈವ ಪುರಾತನ ತತ್ವ ಇದು ಜಾತಿ, ಧರ್ಮ ಅಲ್ಲ ಅಂತ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *