ಗದಗ್ ನಲ್ಲಿ ಸಾಮೂಹಿಕ ವಿವಾಹ: ಸರಿಗಮಪ ಸಿಂಗರ್ಸ್ ನಿಂದ ಅದ್ಭುತ ಕಾರ್ಯಕ್ರಮ

Public TV
1 Min Read

ಗದಗ: ಬಿಜೆಪಿ ಸಂಸದ ಶ್ರೀರಾಮುಲು ಅಭಿಮಾನಿ ಬಳಗದಿಂದ ನಗರದಲ್ಲಿ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಇಂದು ನಡೆಯುತ್ತಿದ್ದು, ಇದರ ಪೂರ್ವಭಾವಿಯಾಗಿ ನಗರದ ವಿದ್ಯಾದಾನ ಮೈದಾನದಲ್ಲಿ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳು ಜರುಗಿದವು.

ಹಾಸ್ಯ ಬ್ರಹ್ಮ ಎಂದೇ ಖ್ಯಾತಿಯಾದ ಗಂಗಾವತಿ ಪ್ರಾಣೇಶ್, ನರಸಿಂಹ ಜ್ಯೋಷಿ, ಮಹಾಮನಿ ಅವರಿಂದ ಹಾಸ್ಯದ ಹೊನಲನ್ನೇ ಹರಿಸಿದರು. ನಂತರ ಸರಿಗಮಪ ಹಾಡುಗಾರರಾದ ಸುಹಾನಾ, ಶ್ರೀರಾಮ ಕಾಸರ್, ಮೆಹಬೂಬ್, ಪರಶುರಾಮ್, ಭಾವನಾ ಬೇಂದ್ರೆ, ಪ್ರಣತಿ ಎ.ಎಸ್, ಲಹರಿ ಅವರ ಅದ್ಭುತವಾದ ಹಾಡುಗಳು ಎಲ್ಲರನ್ನ ಮೈ ಮರೆಯುವಂತೆ ಮಾಡಿತು.

ಸರಿಗಮಪ ಹಾಡುಗಾರರ ಹಾಡಿಗೆ ಪ್ರೇಕ್ಷಕರು ಚಪ್ಪಾಳೆಯ ಸುರಿಮಳೆಯೇ ಸುರಿಸಿದರು. ಮಂಗಳೂರು ಹೆಜ್ಜೆನಾದ ತಂಡದ ಡ್ಯಾರ್ನ್ಸ್ ಗೆ ಕೆಕೆ, ಸಿಳ್ಳೆ, ಚಪ್ಪಾಳೆ ಮೂಲಕ ಎಲ್ಲರನ್ನು ಮೈನಮಿರೆಳಿಸುವಂತೆ ಮಾಡುವ ಮೂಲಕ ಅದ್ಭುತ ನೃತ್ಯ ಪ್ರದರ್ಶನ ಮಾಡಿ ತೋರಿಸಿದರು. ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರಿಗೆ ಬಿ.ಶ್ರೀರಾಮುಲು, ಜನಾರ್ದನ ರೆಡ್ಡಿ ಹಾಗೂ ಅಭಿಮಾನಿ ಬಳಗದವರು ಪಾಲ್ಗೊಂಡು ಸನ್ಮಾನಿಸಿದರು.

Share This Article
Leave a Comment

Leave a Reply

Your email address will not be published. Required fields are marked *