ಮೊದಲು ಮಗುವಿಗೆ, ಈಗ ತಾಯಿಯ ಮೈ ಮೇಲೆ ಬ್ಲೇಡ್‍ನಿಂದ ಕುಯ್ದಂತೆ ಗುರುತು

Public TV
1 Min Read

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನ ಕೋಟೂರು ಗ್ರಾಮದ ಪೂಜೇರಿ ಕುಟುಂಬಸ್ಥರು ಭಾನಾಮತಿಯಿಂದ ನೊಂದು ಹೋಗಿದ್ದೇವೆ ಅಂತಿದ್ದಾರೆ.

ಪೂಜೇರಿ ಕುಟುಂಬಸ್ಥರು ಕಳೆದ ಹಲವಾರು ವರ್ಷಗಳಿಂದ ಭಾನಾಮತಿ ಕಾಟಕ್ಕೆ ತುತ್ತಾಗಿದ್ದು, ಇತ್ತೀಚಿಗೆ ಭಾನಾಮತಿ ಕಾಟ ಹೆಚ್ಚಾಗಿದೆ ಎನ್ನುತ್ತಿದ್ದಾರೆ. ಮೊದಲು ಭಾರತಿ ಪೂಜೇರಿ ಅವರ ಕಣ್ಣಲ್ಲಿ ಖಾರದ ಪುಡಿ ಬಿದ್ದ ಅನುಭವ ಆಗ್ತಿತ್ತು. ಬಳಿಕ ಮೂರು ತಿಂಗಳ ಮಗುವಿನ ಮೈಮೇಲೆ ಬ್ಲೇಡ್‍ನಿಂದ ಕೊಯ್ದಂತಾಗಿ ರಕ್ತ ಬರುತ್ತಿತ್ತು. ಇದೀಗ ಮತ್ತೆ ಭಾರತಿ ಮೈ ಮೇಲೆಲ್ಲಾ ಬ್ಲೇಡ್‍ನಿಂದ ಕುಯ್ದ ಗುರುತುಗಳಾಗ್ತಿವೆ.

ಈ ವಿಚಾರವಾಗಿ ತಾಯಿ ಮತ್ತು ಮಗುವನ್ನು ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ, ಎಕ್ಸರೇ, ಸ್ಕ್ಯಾನಿಂಗ್ ಸೇರಿದಂತೆ ವಿವಿಧ ಟೆಸ್ಟ್ ಮಾಡಿಸಿದ್ದಾರೆ. ಆದ್ರೆ ಫಲಿತಾಂಶ ಮಾತ್ರ ಶೂನ್ಯ. ದೇವರು, ಪೂಜೆ- ಪುನಸ್ಕಾರ, ಹೋಮ-ಹವನ ಅಂತಾ ಏನೇ ಮಾಡಿದ್ರೂ ಪ್ರಯೋಜನವಾಗಿಲ್ಲ. ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ.

ಭಾನಾಮತಿ ಅನ್ನೋದು ಅಸಲಿಗೆ ಇಲ್ಲವೇ ಇಲ್ಲ. ಅದೊಂದು ಮಾನಸಿಕ ಕಾಯಿಲೆ, ಕೌನ್ಸೆಲಿಂಗ್ ಮಾಡುವ ಮೂಲಕ ಸರಿಮಾಡಬೇಕು ಎಂದು ನುರಿತ ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: ಅಚ್ಚರಿ: 2 ವರ್ಷದ ಮಗುವಿನ ದೇಹದಲ್ಲಿ ಬ್ಲೇಡ್ ನಿಂದ ಕೊಯ್ದಂತೆ ಹೊರಬರುತ್ತಿದೆ ರಕ್ತ!

Share This Article
Leave a Comment

Leave a Reply

Your email address will not be published. Required fields are marked *