ಮಾರ್ಚ್ 22

Public TV
2 Min Read

ಮಾರ್ಚ್ 22

ದಿನಕ್ಕೊಂದರಂತೆ ಸಿನಿಮಾ ಸೆಟ್ಟೇರುತ್ತಿರುವ ಇಂದಿನ ದಿನಗಳಲ್ಲಿ ಸಾಮಾಜಿಕ ಬದ್ಧತೆಯುಳ್ಳ ಸಿನಿಮಾಗಳು ಕಣ್ಮರೆಯಾಗುತ್ತಿರುವ ನಡುವೆಯೂ ವಿಶೇಷ ಸಾಮಾಜಿಕ ಕಳಕಳಿಯೊಂದಿಗೆ ಚಿತ್ರವೊಂದನ್ನು ಬಿಡುಗಡೆ ಮಾಡ ಹೊರಟಿದ್ದಾರೆ ನಿರ್ಮಾಪಕ ಹರೀಶ್ ಶೇರಿಗಾರ್ ದಂಪತಿಗಳು.

ಹೌದು, ACME ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಬ್ಯಾನರ್ ನಡಿಯಲ್ಲಿ “ಮಾರ್ಚ್ 22” ಚಿತ್ರ ಸದ್ಯದಲ್ಲೇ ತೆರೆಕಾಣಲಿದೆ.

ಮಂಗಳೂರು ಮೂಲದ ನಿರ್ಮಾಪಕರಾದ ದುಬೈನ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಹಾಗೂ ಅವರ ಧರ್ಮಪತ್ನಿಯಾದ ಶರ್ಮಿಳಾ ಶೇರಿಗಾರ್ ‘ಮಾರ್ಚ್ 22’ ಚಿತ್ರವನ್ನು ನಿರ್ಮಿಸಿದ್ದು, ಚಿತ್ರ ಸುಂದರವಾಗಿ ಮೂಡಿಬಂದಿದೆ.

ಹಿರಿಯ ನಿರ್ದೇಶಕರಾದ ಕೂಡ್ಲು ರಾಮಕೃಷ್ಣ ಈ ಚಿತ್ರವನ್ನು ನಿರ್ದೇಶಿಸಿದ್ದು, ಚಿತ್ರದ ನಾಯಕರಾಗಿ ಆರ್ಯವರ್ಧನ್ ಹಾಗೂ ಕಿರಣ್ ರಾಜ್ ಕಾಣಿಸಿಕೊಂಡಿದ್ದರೆ, ನಾಯಕಿಯರಾಗಿ ಮೇಘಶ್ರೀ ಹಾಗೂ ದೀಪ್ತಿ ಶೆಟ್ಟಿಯವರು ಕಾಣಿಸಿಕೊಂಡಿದ್ದಾರೆ.

ಭಾರತದ ಸರ್ವಸಮಾನ ಮನಸ್ಥಿತಿಯ ನಡುವೆಯೂ ಅಲ್ಲಲ್ಲಿ ನೆಡೆಯುವ ಕೋಮುಸಾಮರಸ್ಯವನ್ನು ಹಾಳುಗೈಯುವ ಘಟನೆಗಳು ಸಮಾಜದ ದಿಕ್ಕನ್ನು ಹೇಗೆ ಬದಲಾಯಿಸಬಲ್ಲದು ಎನ್ನುವುದು ಚಿತ್ರದಲ್ಲಿ ಮುಖ್ಯವಾಗಿ ತೋರಿಬರುವ ಸಾಮಾಜಿಕ ಕಳಕಳಿಯಾಗಿ ಕಂಡುಬರಲಿದೆ.

ಚಿತ್ರದ ಕಥಾಹಂದರವು ಉತ್ತಮವಾಗಿದ್ದು, ಅರ್ಥಪೂರ್ಣ ಸಂದೇಶದೊಡನೆ, ಸಮಾಜದ ಎಲ್ಲರನ್ನೂ ಸಮನ್ವಯದಿಂದ ಬದುಕುವಂತೆ ಪ್ರೇರೇಪಿಸಲು ಸಿನಿಮಾ ಸಶಕ್ತವಾಗಿದೆ.

ಇದಲ್ಲದೇ ಜ್ವಲಂತ ಸಮಸ್ಯೆಯೆಂದೇ ಬಿಂಬಿಸಲ್ಪಡುತ್ತಿರುವ ಜಲಸಂಪನ್ಮೂಲದ ಕೊರತೆಯ ಕುರಿತಾಗಿಯೂ ಚಿತ್ರ ಬೆಳಕು ಚೆಲ್ಲುತ್ತಿರುವುದು, ಚಿತ್ರ ಪ್ರಸ್ತುತ ವಿದ್ಯಮಾನಗಳಿಗೆ ತೆರದುಕೊಂಡಿರುವ ಬಗೆಯನ್ನು ಸ್ಪಷ್ಟಪಡಿಸುತ್ತದೆ.

ಇನ್ನು ಅನಿವಾಸಿ ಭಾರತೀಯ, ಕನ್ನಡಿಗ ಪದ್ಮಶ್ರೀ ಡಾ. ಬಿ.ಆರ್ ಶೆಟ್ಟಿಯವರು ಈ ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ವಿಶೇಷತೆಯಾಗಿದೆ.

ಚಿತ್ರದ ನಿರ್ದೇಶಕರಾದ ಕೂಡ್ಲು ರಮೇಶ್ ರವರು ಜೀವಜಲದ ಮಹತ್ತ್ವ ಹಾಗೂ ಜಾಗೃತಿಯ ಸಂದೇಶ ಸಾರುವ ಸಿನಿಮಾ ಇದಾಗಿದ್ದು, ಸಿನಿರಸಿಕರಿಂದ ಬಹಳಷ್ಟು ಪ್ರತಿಕ್ರಿಯೆ ಈಗಾಗಲೇ ಒದಗಿಬಂದಿದೆ. ವಾಸ್ತವಿಕ ಪರಿಕಲ್ಪನೆಯೊಂದಿಗೆ ಅದ್ಭುತ ಕಥೆಯೊಂದನ್ನು ಜನರೆದುರು ತೆರೆದಿಡುವ ಚಿತ್ರ ಇದಾಗಿರುವುದರಿಂದ ಸಹಜವಾಗಿಯೇ ನಿರೀಕ್ಷೆ, ಪ್ರತೀಕ್ಷೆಗಳು ಮುಗಿಲು ಮುಟ್ಟಿದೆ ಎಂದಿರುವುದು ಚಿತ್ರದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಚಿತ್ರದಲ್ಲಿ ಖ್ಯಾತ ಸಹನಟರ ದಂಡೇ ಇದ್ದು, ಅನಂತ್ ನಾಗ್, ರವಿ ಕಾಳೆ, ಜೈಜಗದೀಶ್, ಶರತ್ ಲೋಹಿತಾಶ್ವ, ವಿನಯಾಪ್ರಸಾದ್, ಸಾಧುಕೋಕಿಲ, ಕಿಶೋರ್, ಶ್ರೀನಿವಾಸಮೂರ್ತಿ ಇನ್ನಿತರರ ನಟನೆ ಮನೋಜ್ಞವಾಗಿ ಮೂಡಿಬಂದಿದೆ. ಹಾಗಾಗಿ ಸದ್ಯದಲ್ಲೇ ತೆರೆಗೆ ಬರಲಿರುವ “ಮಾರ್ಚ್ 22” ಚಲನಚಿತ್ರ ಬೆಳ್ಳಿಪರದೆಯ ಹಿಟ್ ಆಗುವುದನ್ನು ಬಹುತೇಕ ಖಾತರಿಗೊಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *