ಕೊಡಗು | ಕಾಡಾನೆ ದಾಳಿಯಿಂದ ಓರ್ವ ವ್ಯಕ್ತಿಯ ಕೈಮುರಿತ

Public TV
1 Min Read

ಮಡಿಕೇರಿ: ಜಿಲ್ಲೆಯ ಪೊನ್ನಂಪೇಟೆ (Ponnamapete) ತಾಲೂಕಿನ ಚೆನ್ನಂಗಿ ಬಸವನಹಳ್ಳಿಯ ಹಾಡಿಯಲ್ಲಿ ಕಾಡಾನೆ ದಾಳಿ ನಡೆಸಿದೆ. ಹಾಡಿ ನಿವಾಸಿ ಜೆ.ಹೆಚ್ ಚಂದ್ರ ಅವರ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಪರಿಣಾಮ ಕೈಮುರಿದಿದೆ.ಇದನ್ನೂ ಓದಿ:

ನಿನ್ನೆ (ನ.14) ಸಂಜೆ ಹಾಡಿ ಸಮೀಪದಲ್ಲಿ ಚಂದ್ರ ನಡೆದುಕೊಂಡು ಬರುತ್ತಿದ್ದರು. ಈ ಸಂದರ್ಭದಲ್ಲಿ ಕಾಡಾನೆ ದಾಳಿ ನಡೆಸಿದೆ. ತಕ್ಷಣವೇ ಆತನನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಷಯ ತಿಳಿದ ಬಳಿಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು. ಸದ್ಯ ಹಾಡಿ ಸಮೀಪದಲ್ಲಿ ಇರುವ ಕಾಡಾನೆಯನ್ನು ಮೀಸಲು ಅರಣ್ಯ ಪ್ರದೇಶಕ್ಕೆ ಓಡಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಸಜ್ಜಾಗಿದ್ದಾರೆ.ಇದನ್ನೂ ಓದಿ:

Share This Article