ಆಪ್ ನಾಯಕ ಮನೀಶ್ ಸಿಸೋಡಿಯಾ ಜೈಲುಪಾಲು

Public TV
1 Min Read

ನವದೆಹಲಿ: ಸಿಬಿಐ (CBI) ವಿಶೇಷ ನ್ಯಾಯಾಲಯ ಆಪ್ (AAP) ನಾಯಕ, ದೆಹಲಿಯ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾಗೆ (Manish Sisodia) 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. 7 ದಿನಗಳ ಸಿಬಿಐ ಕಸ್ಟಡಿ ಅಂತ್ಯವಾದ ಹಿನ್ನೆಲೆ ಮಾರ್ಚ್ 20ರ ವರೆಗೂ ನ್ಯಾಯಂಗ ಬಂಧನಕ್ಕೆ ನೀಡಲಾಗಿದೆ.

ದೆಹಲಿಯ ಹೊಸ ಮದ್ಯ ನೀತಿ ಹರಗಣಕ್ಕೆ ಸಂಬಂಧಿಸಿದಂತೆ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. 7 ದಿನಗಳ ವಿಚಾರಣೆ ನಡೆಸಿದ ಅಧಿಕಾರಿಗಳು ಸೋಮವಾರ ಅವರ ವಿಚಾರಣೆ ಅಗತ್ಯ ಇಲ್ಲ, ಮುಂದೆ ಅಗತ್ಯ ಬಿದ್ದಲ್ಲಿ ಕೋರ್ಟ್ ಮೂಲಕ ಕಸ್ಟಡಿ ಪಡೆಯುವುದಾಗಿ ಸಿಬಿಐ ಪರ ವಕೀಲರು ನ್ಯಾಯಲಯಕ್ಕೆ ಹೇಳಿದರು.

ಇಡೀ ಪ್ರಕರಣವನ್ನು ರಾಜಕೀಯಗೊಳಿಸಲಾಗುತ್ತಿದೆ. ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದರಿಂದ ಸಾಕ್ಷ್ಯಗಳು ಭಯಗೊಂಡಿವೆ ಎಂದು ಕೋರ್ಟ್‌ಗೆ ತಿಳಿಸಿದರು. ಇದಕ್ಕೆ ಪ್ರತಿವಾದ ಮಂಡಿಸಿದ ಸಿಸೋಡಿಯಾ ಪರ ವಕೀಲರು, ಮಾಧ್ಯಮಗಳಿಗ ಸಿಬಿಐ ಅಧಿಕಾರಿಗಳು ಹೆದರುತ್ತಾರೆಯೇ ಎಂದು ಪ್ರಶ್ನಿಸಿದರು. ಮಾಧ್ಯಮಗಳು ವರದಿ ಮಾಡುತ್ತವೆ. ಕಾರ್ಯಕರ್ತರು ಶಾಂತಿಯುತವಾಗಿ ಪ್ರತಿಭಟನೆ ಮಾಡುವವರೆಗೂ ನ್ಯಾಯಾಲಯ ಈ ಬಗ್ಗೆ ಚಿಂತಿಸುವುದಿಲ್ಲ ಎಂದು ನ್ಯಾಯಧೀಶರು ಹೇಳಿದರು. ಇದನ್ನೂ ಓದಿ: ಬೀದಿ ನಾಯಿಗಳನ್ನು ತಿನ್ನಲು ಅಸ್ಸಾಂಗೆ ಕಳುಹಿಸಿ- ಮಹಾ ಶಾಸಕನಿಂದ ವಿವಾದಾತ್ಮಕ ಹೇಳಿಕೆ

ನ್ಯಾಯಾಂಗ ಬಂಧನದ ಅವಧಿಯಲ್ಲಿ ಸಿಸೋಡಿಯಾಗೆ ಭಗವದ್ಗೀತೆ, ಡೈರಿ, ಪೆನ್ನು, ಕನ್ನಡಕ ನೀಡಬೇಕು ಎಂದು ಅವರ ಪರ ವಕೀಲರು ಮನವಿ ಮಾಡಿದರು. ಸಿಸೋಡಿಯಾ ಮನವಿ ಸ್ಪಂದಿಸಿದ ನ್ಯಾಯಾಧೀಶ ಎಂಕೆ ನಾಗ್‌ಪಾಲ್ ಸಂಬಂಧಿಸಿದ ಅಧಿಕಾರಗಳಿಗೆ ಸೂಚನೆ ನೀಡಿದರು. ಇದನ್ನೂ ಓದಿ: BSY ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಭದ್ರತಾ ಲೋಪ

Share This Article
Leave a Comment

Leave a Reply

Your email address will not be published. Required fields are marked *