ಸಿದ್ದರಾಮಯ್ಯ ಓರ್ವ ನಿರುದ್ಯೋಗಿ: ಶ್ರೀರಾಮುಲು

Public TV
1 Min Read

ಮಂಗಳೂರು: ಇಂದು ಸಚಿವ ಸಂಪುಟ ಸೇರಿದ ಶಾಸಕರ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿರುವ ಟೀಕೆಗೆ ಆರೋಗ್ಯ ಸಚಿವ ಶ್ರೀರಾಮಲು ಮಂಗಳೂರಿನಲ್ಲಿ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಓರ್ವ ನಿರುದ್ಯೋಗಿ. ಇದ್ದ ಕೆಲಸವನ್ನು ಅವರದ್ದೇ ಅಹಂಕಾರದಿಂದ ಕಳೆದುಕೊಂಡಿದ್ದಾರೆ. ಇದೀಗ ಕೆಲಸ ಕಳೆದುಕೊಂಡು ನಿರುದ್ಯೋಗಿಯಾಗಿದ್ದಾರೆ. ಸಿದ್ದರಾಮಯ್ಯ ಮಾತ್ರವಲ್ಲ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಪ್ರಸ್ತುತ ನಿರುದ್ಯೋಗಿಗಳಾಗಿದ್ದಾರೆ. ಮಾಡುವುದಕ್ಕೆ ಕೆಲಸ ಇಲ್ಲದೆ ಏನೇನು ಆಡುತ್ತಿದ್ದಾರೆ ಎಂದು ಶ್ರೀರಾಮುಲು ಟೀಕಿಸಿದರು.

ಇದೇ ವೇಳೆ ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡು ಹತಾಶರಾಗಿದ್ದು, ತಾವು ಏನು ಮಾತಡ್ತೇನೆ ಅಂತ ಅವರಿಗೆ ಗೊತ್ತಿರಲ್ಲ ಎಂದು ಸಚಿವ ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ. ಬಿಜೆಪಿ ಸರ್ಕಾರ 5 ವರ್ಷ ಪೂರ್ಣಗೊಳಿಸಲ್ಲ ಎಂಬ ಹೆಚ್.ಡಿ.ಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಮುಲು, ಕುಮಾರಸ್ವಾಮಿ ಎಲ್ಲಿ ಸೀರಿಯಸ್ ಆಗಿ ಇರಬೇಕೋ ಅಲ್ಲಿ ಜೋಕ್ ಮಾಡುತ್ತಾರೆ. ಎಲ್ಲಿ ಜೋಕ್ ಮಾಡಬೇಕೋ ಅಲ್ಲಿ ಸೀರಿಯಸ್ ಆಗುತ್ತಾರೆ. ಅಧಿಕಾರ ಕಳೆದುಕೊಂಡು ಈ ರೀತಿ ಹತಾಶರಾಗಿದ್ದಾರೆ ಎಂದು ಹೆಚ್‍ಡಿಕೆಗೆ ರಾಮುಲು ಟಾಂಗ್ ನೀಡಿದರು.

ಡಿಸಿಎಂ ಸ್ಥಾನದ ಬಗ್ಗೆ ಮಾತನಾಡಿದ ರಾಮುಲು, ಸದ್ಯಕ್ಕೆ ಮೂವರು ಡಿಸಿಎಂ ಆಗಿ ಮುಂದುವರಿಯುತ್ತಾರೆ. ಬಹಳಷ್ಟು ಮಂದಿಗೆ ಸಚಿವ ಸ್ಥಾನದ ಆಸೆ ಇದೆ. ಎಲ್ಲರೂ ಅವಕಾಶಕ್ಕಾಗಿ ಕಾಯಬೇಕಷ್ಟೇ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *