ಶಬರಿಮಲೆಗೆ ಪಾದಯಾತ್ರೆಯ ಮೂಲಕ ತೆರಳುವ ಅಯ್ಯಪ್ಪ ವೃತಧಾರಿಗಳಿಗೆ ಭಕ್ತಿ ಗೌರವಾರ್ಪಣೆ

Public TV
1 Min Read

ಮಂಗಳೂರು: ಶಬರಿಮೆಯಾತ್ರೆಗೆ ತೆರಳಲು ಎಲ್ಲೆಡೆ ಅಯ್ಯಪ್ಪ ವೃತದಾರಿಗಳು ಮಾಲಾಧಾರಣೆ ಮಾಡಿದ್ದು, ಮಕರ ಸಂಕ್ರಮಣಕ್ಕೆ ಶಬರಿಮಲೆಗೆ ತೆರಳಲು ತಯಾರಿ ನಡೆಸುತ್ತಿದ್ದಾರೆ.

ರಾಜ್ಯದ ಕರಾವಳಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಯ್ಯಪ್ಪ ವೃತದಾರಿಗಳು ಮಣಿಕಂಠನ ದರ್ಶನ ಪಡೆಯಲು ತೆರಳುತ್ತಾರೆ. ಅದರಲ್ಲೂ ಕೆಲವು ಅಯ್ಯಪ್ಪ ವೃತಧಾರಿಗಳು ಪಾದಯಾತ್ರೆಯ ಮೂಲಕ ಶಬರಿಮಲೆ ಯಾತ್ರೆ ನಡೆಸುತ್ತಾರೆ. ಮಂಗಳೂರಿನ ಮೂವರು ಅಯ್ಯಪ್ಪ ವೃತಧಾರಿಗಳು ಕೊಲ್ಲೂರಿನಿಂದ ಶಬರಿಮಲೆಗೆ ಪಾದಯಾತ್ರೆ ಆರಂಭಿಸಿದ್ದಾರೆ. ಮಂಗಳೂರಿನ ವಿಜಯ್ ಪಂಡಿತ್ ಹೌಸ್, ನಾಗೇಶ್ 21ನೇ ವರ್ಷದ ಮಾಲಾಧಾರಣೆ ಹಾಗೂ ಪುರುಷೋತ್ತಮ ಕಲ್ಲಾಪು 21ನೇ ವರ್ಷದ ಯಾತ್ರಾಧಾರಿಯಾಗಿದ್ದಾರೆ. ಈ ಮೂವರು ಕಳೆದ ಕೆಲ ದಿನದ ಹಿಂದೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ ಸನ್ನಿಧಿಯಾ ಕೊಡಚಾದ್ರಿ ಬೆಟ್ಟದಿಂದ ಇರುಮುಡಿ ಹೊತ್ತು ಪಾದಯಾತ್ರೆ ಆರಂಭಿಸಿದ್ದು, ಇಂದು ಮಂಗಳೂರು ತಲುಪಿದ್ದಾರೆ.

ಮಂಗಳೂರಿನ ತೊಕ್ಕೊಟ್ಟು ಸೂರ್ಯ ಗದ್ದೆಯ ಅಯ್ಯಪ್ಪ ಸ್ವಾಮಿಗಳ ಬಿರಿಯಲ್ಲಿ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಳ್ಳಾಲ ಘಟಕದಿಂದ ಭಕ್ತಿಯಿಂದ ಗೌರವಿಸಲಾಯಿತು. ಅಯ್ಯಪ್ಪ ಸೇವಾ ಸಮಾಜಂನ ಜಿಲ್ಲಾ ಕೋಶಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ವಲಯಾದ್ಯಕ್ಷ ಆನಂದ ಶೆಟ್ಟಿ ತೊಕ್ಕೊಟ್ಟು, ಮಾಧ್ಯಮ ಸಂಚಾಲಕ ಪ್ರವೀಣ್.ಎಸ್.ಕುಂಪಲ, ವಿಜಿಟಿಯ ರಜನೀಶ್ ನಾಯಕ್, ಗುರುಸ್ವಾಮಿಗಳಾದ ಭರತ್ ಸ್ವಾಮಿ ಒಂಬತ್ತುಕೆರೆ, ಮಹಾಬಲ ಸ್ವಾಮಿ ಕುಂಪಲ, ಸೂರ್ಯ ಸ್ವಾಮಿ ಕುಂಪಲ, ಜಯಂತ್ ಸ್ವಾಮಿ ಮತ್ತು ಟಿ.ಸಿ.ರೋಡ್ ಸೂರ್ಯ ಬಿರಿಯ ಸ್ವಾಮಿಗಳು ಉಪಸ್ಥಿತರಿದ್ದರು. ಈ ಮೂವರು ಶಬರಿಮಲೆ ಯಾತ್ರಾರ್ಥಿಗಳು ಇಲ್ಲಿಂದ ಮುಂದೆ ಪಾದಯಾತ್ರೆ ಆರಂಭಿಸಿದ್ದು, ಸುಮಾರು 450 ಕಿಲೋಮೀಟರ್ ನಷ್ಟು ಬರಿಗಾಲಲ್ಲೇ ಸಾಗಿ ಮಕರ ಜ್ಯೋತಿ ಸಂದರ್ಭದಲ್ಲಿ ಶಬರಿ ಮಲೆ ತಲುಪಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *