ರಾಕೇಶ್ ಮಲ್ಲಿ ಹತ್ಯೆಗೆ ಸುಪಾರಿ ಕೊಟ್ಟಿರೋದು ನಿಜ: ಮನ್ವಿತ್ ರೈ

Public TV
1 Min Read

– ರೈ ಹಣದ ಶಕ್ತಿಯ ಎದುರು ಭಾರತದಲ್ಲಿ ಇರಲು ಸಾಧ್ಯವಿಲ್ಲ

ಮಂಗಳೂರು: ಮುತ್ತಪ್ಪ ರೈ ಅವರ ಆಪ್ತರಾಗಿದ್ದ ರಾಕೇಶ್ ಮಲ್ಲಿಯನ್ನು ಕೊಲೆ ಮಾಡಲು ಮಾಜಿ ಡಾನ್ ಮುತ್ತಪ್ಪ ರೈ ಸುಪಾರಿ ಕೊಟ್ಟಿರುವುದು ನಿಜ ಎಂದು ಮುತ್ತಪ್ಪ ರೈ ಅವರ ಅಕ್ಕನ ಮಗ ಮನ್ವಿತ್ ರೈ ಸ್ಪಷ್ಟಪಡಿಸಿದ್ದಾರೆ.

ಗುರುವಾರ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ರಾಕೇಶ್ ಮಲ್ಲಿ ನನ್ನ ಹತ್ಯೆಗೆ ಮುತ್ತಪ್ಪ ರೈ ಸಂಚು ರೂಪಿಸಿದ್ದು, ಅವರ ಅಕ್ಕನ ಮಗ ಮನ್ವಿತ್ ರೈ ಅವರಿಗೆ 3 ಕೋಟಿ ರೂ. ಕೊಡುತ್ತೇನೆ ರಾಕೇಶ್ ಮಲ್ಲಿಯನ್ನು ಹತ್ಯೆ ಮಾಡಬೇಕೆಂದು ಹೇಳಿದ್ದರು. ಇಂದು ವಿದೇಶದಿಂದ ಮನ್ವಿತ್ ರೈ ವಿಡಿಯೋ ಬಿಡುಗಡೆ ಮಾಡಿದ್ದ. ಅದರಲ್ಲಿ ರಾಕೇಶ್ ಮಲ್ಲಿ ಕೊಲ್ಲಲು ಸುಪಾರಿ ಕೊಡುವುದಾಗಿ ಹೇಳಿದ್ದು ನಿಜ ಎಂದು ಹೇಳಿದ್ದಾರೆ.

ಮುತ್ತಪ್ಪ ರೈ ನನಗೆ ಕರೆ ಮಾಡಿ ಹಣ ಕೊಡುತ್ತೇನೆ ಅವನನ್ನು ಮುಗಿಸುವಂತೆ ಹೇಳಿದ್ದರು. ಆದರೆ ನಾನು ಅದಕ್ಕೆ ಒಪ್ಪಿರಲಿಲ್ಲ. ನಿಮಗೆ ಏನಾದರೂ ತೊಂದರೆಯಾದರೆ ಸಹಾಯ ಮಾಡುತ್ತೇನೆ. ಆದರೆ ಈ ರೀತಿ ಕೆಲಸಗಳನ್ನು ಮಾಡುವುದಿಲ್ಲ ಎಂದು ಹೇಳಿದ್ದೆ. ಆಗ ನನಗೂ ಕೂಡ ಜೀವ ಬೆದರಿಕೆ ಹಾಕಿದ್ದರು ಎಂದು ಮನ್ವಿತ್ ಹೇಳಿದ್ದಾರೆ. ಇದನ್ನು ಓದಿ: ತನ್ನ 30 ವರ್ಷದ ಆಪ್ತ ರಾಕೇಶ್ ಮಲ್ಲಿ ಹತ್ಯೆಗೆ ಸುಪಾರಿ ಕೊಟ್ಟ ಮುತ್ತಪ್ಪ ರೈ?

ಮುತ್ತಪ್ಪ ರೈ ಅವರ ಹಣದ ಶಕ್ತಿಯ ಮುಂದೆ ಭಾರತದಲ್ಲಿ ಇರಲು ಸಾಧ್ಯವಿಲ್ಲ ಅದಕ್ಕಾಗಿ ವಿದೇಶದಲ್ಲಿ ಇದ್ದೇನೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಹೀಗಾಗಿ ರಾಕೇಶ್ ಮಲ್ಲಿಯನ್ನು ಹತ್ಯೆ ಮಾಡಲು ಮುತ್ತಪ್ಪ ರೈ ಯತ್ನಿಸಿದ್ದರು ಅನ್ನೊದು ಮೇಲ್ನೋಟಕ್ಕೆ ಸಾಬೀತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *