ಮಂಗ್ಳೂರು ಸಮಾವೇಶದ ವೇದಿಕೆಗೆ ಗೊಲೀಬಾರ್‌ನಲ್ಲಿ ಮೃತರಾದವರ ಹೆಸರು

Public TV
1 Min Read

ಮಂಗಳೂರು: ಪೌರತ್ವ ಕಾಯ್ದೆಯನ್ನು ವಿರೋಧಿಸಿ ಮಂಗಳೂರಿನಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯ ವೇದಿಕೆಗೆ ಗೊಲೀಬಾರ್ ನಲ್ಲಿ ಮೃತಪಟ್ಟ ಇಬ್ಬರ ಹೆಸರು ಹಾಕಿರೋದು ಎಲ್ಲರನ್ನು ಸೆಳೆಯಿತು.

ಮುಸ್ಲಿಂ ಸೆಂಟ್ರಲ್ ಕಮಿಟಿಯ ನೇತೃತ್ವದಲ್ಲಿ ಸಿ.ಎ.ಎ, ಎನ್.ಆರ್.ಸಿ ವಿರೋಧಿಸಿ ಮಂಗಳೂರಿನ ಅಡ್ಯಾರ್ ಮೈದಾನದಲ್ಲಿನಡೆದ ಬೃಹತ್ ಪ್ರತಿಭಟನೆ ಭಾರೀ ಯಶಸ್ಸು ಕಂಡಿದೆ. ಈ ಬೃಹತ್ ಸಮಾವೇಶಕ್ಕಾಗಿ ಹಾಕಲಾದ ವೇದಿಕೆಗೆ ಶಹೀದ್ ಅಬ್ದುಲ್, ಜಲೀಲ್ ಕಂದಕ್ ಹಾಗೂ ನೌಶೀನ್ ಕುದ್ರೋಳಿಯ ಹೆಸರು ಹಾಕಿರೋದು ಬಂದ ಪ್ರತಿಭಟನಾಕಾರರನ್ನು ಸೆಳೆಯಿತು.

ಡಿಸೆಂಬರ್ 19 ರಂದು ನಡೆದ ಪ್ರತಿಭಟನೆಯ ವೇಳೆ ಲಾಠಿಚಾರ್ಚ್ ನಡೆದು ಬಳಿಕ ಹಿಂಸಾಚಾರಕ್ಕೆ ತಿರುಗಿ ಇಬ್ಬರು ಗೊಲೀಬಾರ್ ಗೆ ಬಲಿಯಾಗಿದ್ದರು. ಈ ಘಟನೆಯ ಬಳಿಕ ನಡೆದ ಮೊದಲ ಬೃಹತ್ ಸಮಾವೇಶ. ಹೀಗಾಗಿ ಈ ಪ್ರತಿಭಟನೆಯ ವೇಳೆ ಗೊಲೀಬಾರ್ ಗೆ ಮೃತಪಟ್ಟ ಒಬ್ಬರ ಹೆಸರನ್ನು ಇಟ್ಟಿರೋದು ಮಾತ್ರವಲ್ಲ ಇಬ್ಬರ ಸಾವಿಗೂ ನ್ಯಾಯ ಸಿಗಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *