Photo Gallery | ಮಂಗಳೂರು ದಸರಾ ವೈಭವ – ಶಾರದಾ ಮಾತೆಗೆ ಅಷ್ಟ ದಿನದ ಅಲಂಕಾರ

Public TV
0 Min Read
ಮಂಗಳೂರಿನ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಮಹೋತ್ಸವದ ಸಂಭ್ರಮ ಮನೆಮಾಡಿದೆ. 9 ದಿನಗಳ ಕಾಲ ಈ ಕ್ಷೇತ್ರದಲ್ಲಿ ಪೂಜಿಸಲ್ಪಡುವ ನವದುರ್ಗೆಯರ ಮೂರ್ತಿಯೊಂದಿಗೆ ಶಾರದಾ ಮಾತೆಯ ಮೂರ್ತಿಯೂ ಪ್ರತಿಷ್ಠಾಪನೆಗೊಂಡಿದೆ. ಶಾರದಾ ಮಾತ್ರೆಗೆ ದಿನಕ್ಕೊಂದು ರೀತಿಯಲ್ಲಿ ವಿಶೇಷ ಅಲಂಕಾರ ಮಾಡುವ ಮೂಲಕ ದಸರಾ ವೈಭವಕ್ಕೆ ಮೆರುಗು ನೀಡಲಾಗುತ್ತಿದೆ. ಮಾತೆ ದರ್ಶನಕ್ಕೆ ಬರುವ ಭಕ್ತರು ಅದ್ಧೂರಿ ಅಲಂಕಾರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಹಾಗೆಯೇ ಕುದ್ರೋಳಿ‌ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಪೂಜಿಸಲ್ಪಡುವ ಶಾರದಾ ಮಾತೆಗೆ ನವರಾತ್ರಿಯ 8ನೇ ದಿನದ ದಿವ್ಯಾಲಂಕಾರ SPOTLIGHT PRODUCTIONS ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ…

Share This Article