– ಮಾನವೀಯತೆ ಮೆರೆದ ಪ್ರತಿಭಟನಾಕಾರರ ವಿಡಿಯೋ ವೈರಲ್
ಮಂಗಳೂರು: ಪೌರತ್ವ ತಿದ್ದುಪಡೆ ಕಾಯ್ದೆ ವಿರೋಧಿಸಿ ಇಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಇಬ್ಬರು ಮಹಿಳೆಯರು ಸಿಲುಕಿ ಪರದಾಡುವಂತಾಗಿತ್ತು. ಈ ವೇಳೆ ಪ್ರತಿಭಟನಾಕಾರರು ಆಟೋ ಎತ್ತಿ ಡಿವೈಡರ್ ದಾಟಿಸಿ ಮಾನವೀಯತೆ ಮೆರೆದಿದ್ದಾರೆ.
ಮಂಗಳೂರಿನ ಅಡ್ಯಾರ್ ಮೈದಾನದಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಸೇರಿದ್ದರು. ಹೀಗಾಗಿ ಅಡ್ಯಾರ್ ಸುತ್ತಮುತ್ತ ಸಂಚಾರ ಸ್ಥಗಿತಗೊಂಡಿತ್ತು. ಈ ನಡುವೆ ಅನಾರೋಗ್ಯ ಪೀಡಿತ ಮಹಿಳೆಯರಿಬ್ಬರು ಆಟೋ ಒಂದರಲ್ಲಿ ಬಂದಿದ್ದು, ರಸ್ತೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಇದನ್ನೂ ಓದಿ: ‘ಅಮಿತ್ ಶಾ ಭಾರತ ಕಂಡರಿಯದ ಕ್ರೂರಿ’- ಶಾಂತಯುತವಾಗಿ ಮುಗಿದ ಮಂಗ್ಳೂರು ಪ್ರತಿಭಟನೆ
ಕೆಲ ಪ್ರತಿಭಟನಾಕಾರರು ಆಟೋ ಸಿಲುಕಿದ್ದನ್ನು ಹಾಗೂ ಮಹಿಳೆಯರ ಸಮಸ್ಯೆ ಅರಿತು ಸಹಾಯಕ್ಕೆ ನಿಂತರು. ಬಳಿಕ ಆಟೋವನ್ನು ಎತ್ತಿ ಡಿವೈಡರ್ ದಾಟಿಸಿ ಇನ್ನೊಂದು ರಸ್ತೆಗೆ ಸಾಗಿಸಿದರು. ಇದರಿಂದಾಗಿ ಮಹಿಳೆಯರು ಆಟೋವನ್ನು ಏರಿ ಆಸ್ಪತ್ರೆ ಕಡೆಗೆ ಸಂಚರಿಸಿದರು. ಪ್ರತಿಭಟನಾಕಾರರ ಈ ಮಾನವೀಯತೆ ಕೆಲಸದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.