ಮಹಿಳಾ ಎಸ್‍ಐ ಕತ್ತಿನ ಪಟ್ಟಿ ಹಿಡಿದು ಎಳೆದಾಡಿ ಎಎಸ್‍ಐ ಹಲ್ಲೆ

Public TV
1 Min Read

ಮಂಡ್ಯ: ರಾತ್ರಿ ಗಸ್ತಿಗೆ ಪೊಲೀಸರನ್ನ ನಿಯೋಜಿಸುವ ವಿಚಾರದಲ್ಲಿ ಮಹಿಳಾ ಎಸ್‍ಐ ಮೇಲೆ ಎಎಸ್‍ಐ ಹಲ್ಲೆ ನಡೆಸಿದ್ದಾರೆ.

ಮಂಡ್ಯ ತಾಲೂಕಿನ ಬಸರಾಳು ಠಾಣೆಯ ಎಸ್‍ಐ ಜಯಗೌರಿ ಮೇಲೆ ಎಎಸ್‍ಐ ಶಿವನಂಜೇಗೌಡ ಹಲ್ಲೆ ನಡೆಸಿದ್ದಾರೆ. ಶನಿವಾರ ಮುಖ್ಯಮಂತ್ರಿಗಳ ಕಾರ್ಯಕ್ರಮದ ಬಂದೋಬಸ್ತ್ ಮುಗಿಸಿ ಸಂಜೆ 4 ಗಂಟೆ ಸುಮಾರಿಗೆ ಎಸ್‍ಐ ಜಯಗೌರಿ ಠಾಣೆಗೆ ವಾಪಸ್ಸಾಗಿದ್ದರು. ಈ ವೇಳೆ ಪೊಲೀಸರನ್ನು ರಾತ್ರಿ ಗಸ್ತಿಗೆ ನಿಯೋಜನೆ ಮಾಡುವ ಸಂಬಂಧ ಇಬ್ಬರ ನಡುವೆ ಗಲಾಟೆ ನಡೆದಿತ್ತು.

ಈ ವೇಳೆ ಜಯಗೌರಿ ಬಳಿ ಸಿಬ್ಬಂದಿ ಇಲ್ಲವೆಂದು ಎಎಸ್‍ಐ ಶಿವನಂಜೇಗೌಡ ಹೇಳಿದರು. ಈಗ ನೀವು ಮನೆಗೆ ಹೋಗಿ ವಿಶ್ರಾಂತಿ ಪಡೆದು ರಾತ್ರಿ ಗಸ್ತಿಗೆ ಬನ್ನಿ ಅಂತ ಎಸ್‍ಐ ಜಯಗೌರಿ ಹೇಳಿರು. ಇದರಿಂದ ಮತ್ತೆ ಸಿಟ್ಟುಗೊಂಡ ಎಎಸ್‍ಐ ಬೆಳಗ್ಗೆಯಿಂದ ಕರ್ತವ್ಯ ನಿರ್ವಹಿಸಿದ್ದೀನಿ. ರಾತ್ರಿ ಗಸ್ತಿಗೆ ನಾನ್ಯಾಕೆ ಹೋಗಲಿ ಅಂತ ಜಯಗೌರಿ ಜೊತೆಗೆ ಜಗಳಕ್ಕಿಳಿದಿದ್ರು.

ಇದಾದ ಬಳಿಕ ರೈಟರ್ ಕೊಠಡಿಯಲ್ಲಿ ಯೂನಿಫಾರ್ಮ್‍ಗೆ ಕೈ ಹಾಕಿ ಕತ್ತಿನ ಪಟ್ಟಿ ಹಿಡಿದು ಎಳೆದಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಅಂತ ಜಯಗೌರಿ ಆರೋಪಿಸಿದ್ದಾರೆ ಈ ಹಿನ್ನೆಲೆಯಲ್ಲಿ ಎಎಸ್‍ಐ ಶಿವನಂಜೇಗೌಡ ವಿರುದ್ಧ ಐಪಿಸಿ ಸೆಕ್ಷನ್ 323(ಹಲ್ಲೆ), 354(ಕಿರುಕುಳ), 504(ಅವಾಚ್ಯ ನಿಂದನೆ), 506(ಕೊಲೆ ಬೆದರಿಕೆ) ರ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *