ಸಿಎಂ ಮೇಲೆ ಮುನಿಸಿಲ್ಲ, ಕಾಂಗ್ರೆಸ್ ಬಿಡಲ್ಲ: ಅಂಬರೀಷ್ ಸ್ಪಷ್ಟನೆ

Public TV
1 Min Read

ಮಂಡ್ಯ: ಸಚಿವ ಸ್ಥಾನ ಕಳೆದುಕೊಂಡಿರುವುದಕ್ಕೆ ನನಗೆ ಮುಖ್ಯಮಂತ್ರಿಗಳ ಮೇಲೆ ಯಾವುದೇ ಮುನಿಸಿಲ್ಲ. ನನಗೆ ಎಲ್ಲವನ್ನೂ ಕೊಟ್ಟ ಕಾಂಗ್ರೆಸ್ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಹೋಗಲ್ಲ ಎಂದು ಮಂಡ್ಯ ಶಾಸಕ ಅಂಬರೀಷ್ ಹೇಳಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿರುವುದು ಸಂತಸ ತಂದಿದೆ. ಒಂದು ವರ್ಷ ಆಡಳಿತ ಬಾಕಿ ಇದೆ. ಹಾಗಾಗಿ ಚೆನ್ನಾಗಿ ಕೆಲಸ ಆಗುತ್ತೆ ಎಂದು ಜನ ವಿಶ್ವಾಸ ಇಟ್ಟಿದ್ದಾರೆ. ಜನರಿಗೆ ಒಳ್ಳೆಯದಾಗಲಿ ಎಂದು ತಿಳಿಸಿದ್ರು.

ನನಗೆ ಕಾಂಗ್ರೆಸ್ ಪಕ್ಷ ಎಲ್ಲವನ್ನೂ ಕೊಟ್ಟಿದೆ. ನಾನು ಮುಖ್ಯಮಂತ್ರಿ ಆಗಬೇಕು ಅಂತೇನೂ ಆಸೆ ಇಟ್ಟುಕೊಂಡಿಲ್ಲ. ಜನ ನನ್ನನ್ನು ಮುಖ್ಯಮಂತ್ರಿಗಿಂತ ಚೆನ್ನಾಗಿ ನೋಡಿಕೊಂಡಿದ್ದಾರೆ. ಗೌರವ ಕೊಟ್ಟಿದ್ದಾರೆ. ನನ್ನಂತೆ ಹಲವರು ಮಂತ್ರಿಯಾಗಬೇಕು ಎಂಬ ಆಸೆ ಇಟ್ಟುಕೊಂಡಿರುತ್ತಾರೆ. ನಾನು ಮೂರೂವರೆ ವರ್ಷ ಸಚಿವನಾಗಿದ್ದೇನೆ. ಬೇರೆಯವರಿಗೂ ಒಂದೂವರೆ ವರ್ಷ ಸಿಗಲಿ ಬಿಡಿ ಅಂದ್ರು.

ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಈಗಲೇ ಏನೂ ಹೇಳಲ್ಲ. ಇನ್ನು ಒಂದು ವರ್ಷ ಬಾಕಿ ಇದೆ. ಭವಿಷ್ಯವನ್ನು ಯಾರು ಬಲ್ಲವರು ಅಂತಾ ಹೇಳಿದ ಅಂಬರೀಷ್ ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ಗುಟ್ಟು ಬಿಟ್ಟು ಕೊಡಲಿಲ್ಲ.

Share This Article
Leave a Comment

Leave a Reply

Your email address will not be published. Required fields are marked *