ಪ್ಲ್ಯಾನ್ ಮಾಡಿಯೇ ಮಳವಳ್ಳಿಯ ಬಾಲಕಿಯನ್ನು ರೇಪ್ ಮಾಡಿದ್ದ ಆರೋಪಿ ಕಾಂತರಾಜು

Public TV
2 Min Read

ಮಂಡ್ಯ: ಜಿಲ್ಲೆಯ ಮಳವಳ್ಳಿ (Malavalli) ಪಟ್ಟಣದಲ್ಲಿ ಅ. 11ರಂದು ನಡೆದ ಹೇಯಕೃತ್ಯಕ್ಕೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಅಂದು ಟ್ಯೂಷನ್‍ಗೆ ಹೋಗಿದ್ದ 10 ವರ್ಷದ ಬಾಲಕಿಯನ್ನು (Girl) ರೇಪ್ ಮಾಡಿ ಅಮಾನುಷವಾಗಿ ಟ್ಯೂಷನ್‍ನ ಮೇಲ್ವಿಚಾರಕ ಕೀಚಕ ಕಾಂತರಾಜು ಕೊಲೆ ಮಾಡಿದ್ದ. ಈ ಘಟನೆ ನಡೆದ 24 ಗಂಟೆಯಲ್ಲಿ ಹೇಯಕೃತ್ಯ ಎಸಗಿದ ಕಾಂತರಾಜು ವಿರುದ್ಧ ಬಾಲಕಿಯ ಪೋಷಕರು ಸೇರಿದಂತೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.

ಇದೀಗ ಆರೋಪಿ ಕಾಂತರಾಜು ವಿರುದ್ಧ ಪೊಲೀಸರು 638 ಪುಟಗಳ ಚಾರ್ಜ್ ಶೀಟ್‍ನ್ನು ಮಂಡ್ಯ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈ 638 ಪುಟಗಳ ಚಾರ್ಜ್ ಶೀಟ್‍ನಲ್ಲಿ ಕಾಂತರಾಜುವಿನ ಜಾತಕವನ್ನೇ ಪೊಲೀಸರು ಬರೆದಿದ್ದು, ಕೃತ್ಯದ ಇಂಚಿಂಚು ಮಾಹಿತಿಯನ್ನು ಸಹ ಉಲ್ಲೇಖ ಮಾಡಲಾಗಿದೆ. ಈ ಚಾರ್ಜ್‍ಶೀಟ್‍ನ್ನು ಗಮನಿಸಿದರೆ ಈ ಕಾಮುಕ ಕಾಂತರಾಜು ಈ ಕೃತ್ಯವನ್ನು ಫ್ರೀ ಪ್ಲ್ಯಾನ್ ಮಾಡಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ರೇಪ್ (Rape) ಅಂಡ್ ಮರ್ಡರ್ (Murder) ಆದ ಬಾಲಕಿಯ ಮೇಲೆ ತನ್ನ ವಿಕೃತ ಕಾಮದ ದೃಷ್ಟಿಯನ್ನು ಕಾಂತರಾಜು ನಾಲ್ಕೈದು ತಿಂಗಳ ಹಿಂದೆಯೇ ಬೀರಿದ್ದ. ಇದಕ್ಕಾಗಿಯೇ ಹಲವು ದಿನಗಳಿಂದ ಆ ಹರಿಯದ ಬಾಲಕಿಗೆ ಚಾಕಲೇಟ್ ಕೊಡಿಸುತ್ತಿದ್ದ. ಈ ಕಾಮುಕನ ಬುದ್ಧಿ ತಿಳಿಯದ ಪುಟ್ಟ ಬಾಲಕಿ ಚಾಕಲೇಟ್‍ನ್ನು ತಿನ್ನುತ್ತಿತ್ತು. ಪ್ರಕರಣ ನಡೆದ ದಿನ ಈ ಕಾಮುಕ ಕಾಂತರಾಜುವೇ ಕರೆ ಮಾಡಿ ಬಾಲಕಿಯನ್ನು ಟ್ಯೂಷನ್ ಇದೆ ಎಂದು ಕರೆಸಿದ್ದಾನೆ. ಇದನ್ನೂ ಓದಿ: ಮಳವಳ್ಳಿ ಬಾಲಕಿಯ ರೇಪ್ & ಮರ್ಡರ್- ಆರೋಪಿ ವಿರುದ್ಧ 638 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

ಈ ವೇಳೆ ಟ್ಯೂಷನ್ ಬಾಗಿಲು ಹಾಕಿರುವುದನ್ನು ನೋಡಿ ಅಲ್ಲಿಯೇ ಇದ್ದ ಕಾಂತರಾಜುವಿನ ರೂಮ್‍ಗೆ ಹೋದಾಗ ಆತ ಬಾಲಕಿಗೆ ಮತ್ತೆ ಚಾಕಲೇಟ್ ಕೊಟ್ಟು, ಪಕ್ಕದಲ್ಲಿ ನಿರ್ಮಾಣದ ಹಂತದಲ್ಲಿ ಇದ್ದ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಆ ಪುಟ್ಟ ಕಂದಮ್ಮನ ಮೇಲೆ ಈ ದುರುಳ ಕಾಮುಕ ಆಕೆಯ ಬಾಯಿಗೆ ಬಟ್ಟೆ ತುರುಕಿ ವಿಕೃತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದನ್ನೂ ಓದಿ: ನಾನು ಬದುಕಲು ಅರ್ಹನಲ್ಲ- ಮಂಡ್ಯದ ರೇಪ್ ಆರೋಪಿಗೆ ಈಗ ಪಶ್ಚಾತ್ತಾಪ

STOP RAPE

ಬಳಿಕ ಆಕೆಯ ತಲೆಯ ಭಾಗಕ್ಕೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿ ನಂತರ ಸಂಪ್‍ಗೆ ಎಸೆದು ಹೋಗಿದ್ದಾನೆ. ಬಳಿಕ ನನಗೆ ಏನು ಗೊತ್ತಿಲ್ಲ ಎಂಬಂತೆ ನಟನೆ ಮಾಡಿದ್ದಾನೆ. ಬಳಿಕ ಪೊಲೀಸರು ಪೋಷಕರ ಮೊಬೈಲ್ ಕರೆಯ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದಾಗ ಈ ವಿಕೃತ ಕ್ರೌರ್ಯವನ್ನು ಮೆರೆದಿರುವುದು ಕಾಂತರಾಜು ಎಂದು ತಿಳಿದಿದೆ. ಇದನ್ನೂ ಓದಿ: ನೋಟುಗಳ ಮೇಲೆ ಲಕ್ಷ್ಮಿ, ಗಣೇಶನ ಫೋಟೋವನ್ನು ಮುದ್ರಿಸಿ – ಮೋದಿಗೆ ಕೇಜ್ರಿವಾಲ್ ಮನವಿ

ಒಟ್ಟಾರೆ ಮನೆಯಂಗಳದಲ್ಲಿ ಆಟ ಆಡಿಕೊಂಡು ಇರಬೇಕಾದ ಬಾಲಕಿ ಮೇಲೆ ವಿಕೃತ ದೃಷ್ಟಿಯನ್ನು ಬೀರಿ ಆಕೆಯನ್ನು ಕೊಲೆ ಮಾಡುವ ಮೂಲಕ ಮಾನವಶಾಸ್ತ್ರ ಓದಿಕೊಂಡಿದ್ದ ಕೀಚಕ ಕಾಂತರಾಜು ಮನುಕುಲವೇ ಅಸಹ್ಯ ಪಡುವ ಕೃತ್ಯ ಎಸಗಿದ್ದಾನೆ. ಈತನಿಗೆ ಅತಿ ಕ್ರೂರವಾದ ಶಿಕ್ಷೆ ನೀಡಬೇಕೆಂದು ಮನುಕುಲವೇ ಆಗ್ರಹಿಸುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *