ಹಸು ಸಾವಿನಿಂದ ಮನನೊಂದು ಮಂಡ್ಯದಲ್ಲಿ ರೈತ ಆತ್ಮಹತ್ಯೆ

Public TV
1 Min Read

ಮಂಡ್ಯ: ಮೊದಲೇ ಸಾಲಬಾಧೆಯಿಂದ ಕಂಗಾಲಾಗಿದ್ದ ರೈತ ಜೀವನಾಧಾರವಾಗಿದ್ದ ಹಸು ಸಾವಿನಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ 55 ವರ್ಷದ ರೈತ ವೆಂಕಟಾಚಲ ಆತ್ಮಹತ್ಯೆಗೆ ಶರಣಾದವರು. ವೆಂಕಟಾಚಲ ಅವರಿಗೆ 15 ಗುಂಟೆ ಜಮೀನಿತ್ತು. ಒಂದೂವರೆ ಎಕರೆ ಜಮೀನನ್ನು ಬೇರೆ ರೈತರಿಂದ ಭೋಗ್ಯಕ್ಕೆ ಪಡೆದು ಭತ್ತ ಬೆಳೆದಿದ್ರು. ಆದ್ರೆ ಸಕಾಲಕ್ಕೆ ಮಳೆಯಾಗದ ಕಾರಣ ಬೆಳೆ ಒಣಗಿತ್ತು. ಇದರ ನಡುವೆ ಜೀವನಾಧಾರವಾಗಿದ್ದ ಹಸುವೂ ಕೂಡ ಕಳೆದ ವಾರ ಮೃತಪಟ್ಟಿತ್ತು.

ರೈತ ವೆಂಕಟಾಚಲ ಅವರು ಸುಮಾರು ಎರಡು ಲಕ್ಷ ರೂ. ಕೈಸಾಲ ಮಾಡಿದ್ರು. ಒಡವೆ ಅಡವಿಟ್ಟು 15 ಸಾವಿರ ರೂ. ಸಾಲ ಪಡೆದಿದ್ರು. ಸ್ವಸಹಾಯ ಸಂಘಗಳಿಂದಲೂ 50 ಸಾವಿರ ರೂ. ಸಾಲ ಮಾಡಿದ್ರು. ಇವೆಲ್ಲದ್ದರಿಂದ ಮನನೊಂದ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ.

ಘಟನೆ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *