ರೈತನನ್ನು ಅಟ್ಟಾಡಿಸಿ ಬೈಕ್ ಎಸೆದ ಒಂಟಿ ಸಲಗ – 2 ಹಸು, 1 ಎಮ್ಮೆ ಬಲಿ

Public TV
1 Min Read

ಮಂಡ್ಯ: ಕಾಡಿನಿಂದ ಬಂದ ಒಂಟಿ ಸಲಗದ ದಾಳಿಗೆ ಎರಡು ಹಸುಗಳು ಹಾಗೂ ಒಂದು ಎಮ್ಮೆ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದೇವಿರಹಳ್ಳಿ ಗ್ರಾಮದಲ್ಲಿ ಜರುಗಿದೆ.

ಭೀಮನಕಿಂಡಿ ಬೆಟ್ಟದ ಕಾಡಿನಿಂದ ಇಂದು ಬೆಳಗ್ಗೆ ಒಂಟಿ ಸಲಗವೊಂದು ನೀರು ಕುಡಿಯಲೆಂದು ಭಿಮನಕೆರೆಗೆ ಬಂದಿದೆ. ಈ ವೇಳೆ ಇದ್ದಕ್ಕಿದ್ದ ಹಾಗೆ ಒಂಟಿ ಸಲಗ ಗಾಬರಿಗೊಂಡಿದೆ. ಅಲ್ಲೆ ಪಕ್ಕದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತರ ಕೃಷ್ಣ ಅವರನ್ನು ಅಟ್ಟಾಡಿಸಿದೆ. ನಂತರ ಕೃಷ್ಣ ಅವರ ಬೈಕ್‍ನ್ನು ಸೊಂಡಿಲಿನಿಂದ ಬಿಸಾಡಿದೆ. ಬಳಿಕ ಅಲ್ಲೇ ಇದ್ದ ಎತ್ತಿನಗಾಡಿಯನ್ನು ಸಂಪೂರ್ಣವಾಗಿ ಜಖಂಗೊಳಿಸಿದೆ.

ನಂತರ ಮುಂದೆ ಗದ್ದೆಯಲ್ಲಿ ಮೆಯುತ್ತಿದ್ದ ಎರಡು ಹಸುಗಳು ಹಾಗೂ ಒಂದು ಎಮ್ಮೆಯ ಮೇಲೆ ಒಂಟಿ ಸಲಗ ದಾಳಿ ನಡೆಸಿದೆ. ಈ ವೇಳೆ ಗ್ರಾಮಸ್ಥರು ಬಂದು ಕಿರುಚಿದ ಪರಿಣಾಮ ಒಂಟಿ ಸಲಗ ಹೆದರಿ ಓಡಿ ಹೋಗಿದೆ. ಆನೆ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಹಸು ಹಾಗೂ ಎಮ್ಮೆಗಳು ಸಾವನ್ನಪ್ಪಿವೆ. ಹಲಗೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

Share This Article
Leave a Comment

Leave a Reply

Your email address will not be published. Required fields are marked *