ಏಪ್ರಿಲ್ 2ರಿಂದ ಸುಮಲತಾ ಪರ ನಿರಂತರ ಪ್ರಚಾರಕ್ಕೆ ‘ಜೋಡೆತ್ತು’ ರೆಡಿ!

Public TV
2 Min Read

ಬೆಂಗಳೂರು: ಸ್ಟಾರ್ ಕದನವಾಗಿರುವ ಮಂಡ್ಯ ಲೋಕಸಭಾ ಚುನಾವಣೆಗೆ ಏಪ್ರಿಲ್ 2 ರಿಂದ ಮತ್ತಷ್ಟು ರಂಗು ಬರಲಿದ್ದು, ನಟ ದರ್ಶನ್ ಹಾಗು ನಟ ಯಶ್ ಅವರು ಸುಮಲತಾ ಅವರ ಪರ ನಿರಂತರ ಪ್ರಚಾರ ನಡೆಸಲಿದ್ದಾರೆ.

ದರ್ಶನ್ ಮತ್ತು ಯಶ್ ಇಬ್ಬರೂ ಕೂಡ ಏಕಕಾಲದಲ್ಲಿ ಬೇರೆ ಬೇರೆ ತಾಲೂಕುಗಳಲ್ಲಿ ಪ್ರಚಾರ ನಡೆಸಲಿದ್ದು, ದರ್ಶನ್ 12 ದಿನ ಪ್ರಚಾರ ಮಾಡಿದರೆ, ಯಶ್ ಕೂಡ 13 ದಿನ ಪ್ರಚಾರ ನಡೆಸಲಿದ್ದಾರೆ. ಏಪ್ರಿಲ್ 16 ರಂದು ನಡೆಯುವ ಸಮಾವೇಶದಲ್ಲಿ ಇಬ್ಬರೂ ಒಟ್ಟಿಗೆ ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಪ್ರಚಾರ ನಡೆಯುವ ಅವಧಿಯಲ್ಲೂ ಮಾಸ್ಟರ್ ಪ್ಲಾನ್ ಮಾಡಲಾಗಿದ್ದು, ಪ್ರತಿ ದಿನ ಕ್ಷೇತ್ರದ ಮೂರು ಭಾಗಗಳಲ್ಲಿ ದರ್ಶನ್, ಯಶ್, ಸುಮಲತಾ ಅವರು ಪ್ರಚಾರ ನಡೆಸಲಿದ್ದಾರೆ. ಪ್ರತಿದಿನ ಮಂಡ್ಯ ಲೋಕಸಭಾ ಕ್ಷೇತ್ರದ ಬೇರೆ ಬೇರೆ ಸ್ಥಳಗಳಲ್ಲಿ ಪ್ರಚಾರ ಕಾರ್ಯ ನಡೆಯಲಿದೆ.

ಸುಮಲತಾ: ಏ.2 ಮದ್ದೂರು, ಏ.3 ಮದ್ದೂರು ಮತ್ತು ಮಂಡ್ಯ, ಏ.4 ಮಂಡ್ಯ, ಏ.5 ಶ್ರೀರಂಗಪಟ್ಟಣ, ಏ.6 ಮತ್ತು 7 ಯುಗಾದಿ, ಏ.8 ನಾಗಮಂಗಲ, ಏ.9 ಶ್ರೀರಂಗಪಟ್ಟಣ ಮತ್ತು ಪಾಂಡವರಪುರ, ಏ.10 ಪಾಂಡವಪುರ, ಏ.11 ನಾಗಮಂಗಲ ಮತ್ತು ಕೆಆರ್ ಪೇಟೆ, ಏ.12 ಕೆಆರ್ ಪೇಟೆ, ಏ.13 ಕೆಆರ್ ನಗರ, ಏ.14 ಕೆಆರ್ ನಗರ ಮತ್ತು ಮಳವಳ್ಳಿ, ಏ.15 ಮಳವಳ್ಳಿ, ಏ.16 ರ‍್ಯಾಲಿ.

ದರ್ಶನ್: ಏ.2 ಮಂಡ್ಯ, ಏ.3 ಕೆಆರ್ ಪೇಟೆ, ಏ.4 ನಾಗಮಂಗಲ, ಏ.5, ಏ.6 ಮತ್ತು 7 ಯುಗಾದಿ, ಏ.8 ಮಂಡ್ಯ ಮತ್ತು ಮದ್ದೂರು, ಏ.9 ಮದ್ದೂರು, ಏ.10 ಕೆಆರ್ ನಗರ, ಏ.11 ಕೆಆರ್ ನಗರ ಮತ್ತು ಮಳವಳ್ಳಿ, ಏ.12 ಮಳವಳ್ಳಿ, ಏ.13 ಶ್ರೀರಂಗಪಟ್ಟಣ, ಏ.14 ಶ್ರೀರಂಗಪಟ್ಟಣ ಮತ್ತು ಪಾಂಡವಪುರ, ಏ.15 ಪಾಂಡವಪುರ, ಏ.16 ರ‍್ಯಾಲಿ.

ಯಶ್: ಏ.2 ಶ್ರೀರಂಗಪಟ್ಟಣ, ಏ.3 ಶ್ರೀರಂಗಪಟ್ಟಣ, ಏ.4 ಪಾಂಡವಪುರ, ಏ.5 ಮಳವಳ್ಳಿ, ಏ.6 ಮತ್ತು 7 ಯುಗಾದಿ, ಏ.8 ಮಳವಳ್ಳಿ, ಏ.9 ಮಂಡ್ಯ, ಏ.10 ಮಂಡ್ಯ ಮತ್ತು ಮದ್ದೂರು, ಏ.11 ಮದ್ದೂರು, ಏ.12 ನಾಗಮಂಗಲ, ಏ.13 ನಾಗಮಂಗಲ, ಏ.14 ಕೆಆರ್ ಪೇಟೆ, ಏ.15 ಕೆಆರ್ ಪೇಟೆ ಮತ್ತು ಮಂಡ್ಯ, ಏ.16 ರ‍್ಯಾಲಿ.

Share This Article
Leave a Comment

Leave a Reply

Your email address will not be published. Required fields are marked *