ದಯಾಮರಣ ಕೊಡುವಂತೆ ಮಂಡ್ಯದ ರೈತ ಪ್ರತಿಭಟನೆ

Public TV
1 Min Read

ಮಂಡ್ಯ: ಜಿಲ್ಲೆಯಲ್ಲಿ ರೈತನೊಬ್ಬ ದಯಾಮರಣ ಕೊಡುವಂತೆ ಬೇಡಿಕೆ ಇಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.

ಕಳೆದ 13 ವರ್ಷದಿಂದ ಹೋರಾಟ ನಡೆಸಿದರೂ ನ್ಯಾಯ ಸಿಗದೆ ಬೇಸತ್ತಿರುವ ರೈತ ಪ್ರಭಾಕರ್, ದಯಾಮರಣಕ್ಕಾಗಿ ರಾಜ್ಯಪಾಲರಿಗೂ ಪತ್ರ ಬರೆದಿದ್ದಾರೆ.

ಶ್ರೀರಂಗಪಟ್ಟಣ ತಾಲೂಕಿನ ದಸರಗುಪ್ಪೆ ಗ್ರಾಮದವರಾದ ಪ್ರಭಾಕರ್, ಕಿರಂಗೂರು ಮೂಲಕ ಹಾದು ಹೋಗಿರುವ ಪಿಕಪ್ ನಾಲೆ ಒತ್ತುವರಿ ಬಗ್ಗೆ ಮುಖ್ಯಮಂತ್ರಿ, ಕಂದಾಯ ಸಚಿವರು, ಅಧಿಕಾರಿಗಳು ಸೇರಿ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಡ್ಯಾಂನಲ್ಲಿ ನೀರಿದ್ದರೂ ಕಾಲುವೆ ಒತ್ತುವರಿಯಿಂದ ಜಮೀನಿಗೆ ನೀರನ್ನು ಬಳಸಿಕೊಳ್ಳಲು ಸಾಧ್ಯವಾಗ್ತಿಲ್ಲ.

ಹೀಗಾಗಿ ಕಟ್ಟ ಕಡೆಯ ಹೋರಾಟ ಎಂಬಂತೆ ಶ್ರೀರಂಗಪಟ್ಟಣದ ಮಿನಿವಿಧಾನಸೌಧ ಎದುರು ಅಕ್ಟೋಬರ್ 23, ಅಂದ್ರೆ ಸೋಮವಾರದಿಂದ ಸತ್ಯಾಗ್ರಹ ಶುರು ಮಾಡ್ತಿರೋ ಪ್ರಭಾಕರ್, ಸಮಸ್ಯೆ ಬಗೆಹರಿಸಿ ಇಲ್ಲಾಂದ್ರೆ ದಯಾಮರಣಕ್ಕೆ ಅವಕಾಶ ಕೊಡಿ ಅಂತಾ ಪಟ್ಟು ಹಿಡಿದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *