ನಾಯಿ ಮರಿ ಜೀವ ಉಳಿಸಲು ಹೋಗಿ ಪ್ರಾಣ ಬಿಟ್ಟ ಯುವಕ

Public TV
1 Min Read

ಬೆಳಗಾವಿ(ಚಿಕ್ಕೋಡಿ): ನಾಯಿಮರಿ ಜೀವ ಉಳಿಸಲು ಹೋಗಿ ಬೈಕ್ ಸವಾರನೋರ್ವ ಪ್ರಾಣ ಕಳೆದುಕೊಂಡ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದ ಹೊರವಲಯದಲ್ಲಿ ನಡೆದಿದೆ.

ಸೌರಭ್ ಕಾಶಾಳಕರ(24) ಮೃತ ದುರ್ದೈವಿ. ನಿಪ್ಪಾಣಿ ನಗರ ಹೊರ ವಲಯದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ಅಪಘಾತ ನಡೆದಿದೆ. ಬೈಕ್ ಸವಾರ ಸೌರಭ್ ಮಹಾರಾಷ್ಟ್ರದ ಆಜರಾದಿಂದ ಕೊಲ್ಹಾಪುರಕ್ಕೆ ಬೈಕ್‍ನಲ್ಲಿ ಪ್ರಯಾಣಿಸುವಾಗ ರಸ್ತೆ ಮಧ್ಯದಲ್ಲಿ ನಾಯಿ ಮರಿ ಬಂದಿದೆ. ಅದನ್ನು ರಕ್ಷಿಸಲು ಹೋಗಿ ಯುವಕ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ.

ನಾಯಿ ಮರಿಯನ್ನ ರಕ್ಷಣೆ ಮಾಡಲು ಹೋದಾಗ ಬೈಕ ಸ್ಕಿಡ್ ಆಗಿ ಡಿವೈಡರ್‍ಗೆ ಡಿಕ್ಕಿ ಹೊಡೆದು ಕೆಳಗೆ ಬೀಳುತ್ತಿದ್ದಂತೆಯೇ ಹಿಂಬದಿಯಿಂದ ಬಂದ ಲಾರಿ ಆತನ ಮೈಮೇಲೆ ಹರಿದಿದೆ. ಪರಿಣಾಮ ಸೌರಭ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಿಪ್ಪಾಣಿ ಬಸವೇಶ್ವರ ಚೌಕ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *