ಅಯ್ಯೋ.. ಬಿಟ್ ಬಿಡ್ರೋ.. ನಾನು ಸಾಯ್ತಿನಿ -ಮೂರನೇ ಬಾರಿಗೆ ಕಾಳಿ ನದಿಗೆ ಹಾರಿದ ವ್ಯಕ್ತಿ

Public TV
1 Min Read

ಕಾರವಾರ: ಕೌಟುಂಬಿಕ ಕಲಹದಿಂದ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದ ವ್ಯಕ್ತಿಯೊಬ್ಬ ಮೂರನೇ ಬಾರಿ ಕಾಳಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಸದಾಶಿವ ಗಡದಲ್ಲಿ ನಡೆದಿದೆ.

ಧಾರವಾಡ ಮೂಲದ ಶಂಕರ್ ಬಂಜಾರ ಎಂಬವರೇ ಮತ್ತೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಇವರು ಕಳೆದ ಮಾರ್ಚ್ 28 ರಂದು ಕಾಳಿ ನದಿಗೆ ಹಾರಿ ಆತ್ಮಹತ್ಯೆ ಯತ್ನಿಸಿದ್ದರು. ಇದೀಗ ಮತ್ತೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಈ ಹಿಂದೆ ತನ್ನ ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾಗ ಧಾರವಾಡದ ಮಾನಸಿಕ ರೋಗಿಗಳ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ ಪುನಃ ಕಾರವಾರಕ್ಕೆ ಬಂದು ಕಾಳಿ ನದಿಗೆ ಧುಮುಕಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನೂ ಓದಿ: 1 ವರ್ಷದ ಮಗುವಿನೊಂದಿಗೆ ಕಾಳಿ ನದಿಗೆ ಹಾರಿದ ತಂದೆ

ಈ ಪ್ರಕರಣ ಸಂಬಂಧ ಚಿತ್ತಾಕುಲ ಠಾಣಾ ಪೊಲೀಸರು ಶಂಕರ್ ಅವರನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *